ನಿಗದಿತ ಸಮಯದೊಳಗೆ ತೆರಿಗೆ ಕಟ್ಟಿ, ನಗರಸಭೆಯಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಿ; ಬಿ.ಸಿ ಬಸವರಾಜ್
1 min readಚಿಕ್ಕಮಗಳೂರು: ನಿಗದಿತ ಸಮಯಕ್ಕೆದೊಳಗೆ ತೆರಿಗೆ ಕಟ್ಟಿ ನಗರಸಭೆಗೆ ಸಹಕರಿಸಬೇಕು ಮತ್ತು ನಗರಸಭೆಯಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ನಗರ ಸಭೆ ಆಯುಕ್ತ ಬಿ. ಸಿ ಬಸವರಾಜ್ ಹೇಳಿದರು. ನಗರಸಭೆ ವತಿಯಿಂದ ಗೌರಿ ಕಾಲುವೆ ವಾರ್ಡ್ ನಂ. 24 ರಲ್ಲಿ ‘ತೆರಿಗೆ ವಸೂಲಾತಿ ಆಂದೋಲನ’ ವನ್ನು ಹಮ್ಮಿಕೊಳ್ಳಲಾಯಿತು.
ತೆರಿಗೆ ವಸೂಲಾತಿ ಆಂದೋಲನ ಕುರಿತು ಮಾತನಾಡಿದ ಅವರು, ನಗರದಲ್ಲಿ ಮೂರು ತಂಡಗಳನ್ನು ಮಾಡಿಕೊಂಡಿದ್ದೇವೆ. 1 ರಿಂದ 35 ವಾರ್ಡ್ ಗಳ ಮನೆ ಮನೆಗೆ ಭೇಟಿ ನೀಡಿ ತಮಟೆ ಬಾರಿಸುವುದರ ಮೂಲಕ ತೆರಿಗೆ ಸಂಗ್ರಹ ಮಾಡುತ್ತಿದ್ದೇವೆ. ಮನೆಮನೆ ಪ್ರಚಾರದ ಜೊತೆಗೆ ತೆರಿಗೆ ಆಂದೋಲನ ಶಿಬಿರವನ್ನು ಸಹ ಮಾಡುತ್ತಿದ್ದೇನೆ. ಸಾರ್ವಜನಿಕರು ಬಾಕಿ ಉಳಿಸಿಕೊಂಡಿರುವಂತಹ ತೆರಿಗೆಗಳನ್ನು 12ನೇ ತಾರೀಖಿನ ಒಳಗಾಗಿ ತೆರಿಗೆ ಪಾವತಿ ಮಾಡಬೇಕು ಇಲ್ಲವಾದರೆ 9 ತಂಡಗಳನ್ನು ಮಾಡಿ ನಗರದ ಎಲ್ಲಾ ಮನೆಮನೆಗೆ ಹೋಗಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ನಿಗಧಿತ ಸಮಯದೊಳಗೆ ಪಾವತಿ ಮಾಡಿಲ್ಲ ಎಂದಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಯುಜಿಡಿ, ವಿದ್ಯುತ್, ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಮತ್ತು ಜಪ್ತಿಯಂತಹ ಶಿಸ್ತುಕ್ರಮ ಕೈಗೊಳ್ಳಲಾಗುವುದು ಇದಕ್ಕೆ ಸಾರ್ವಜನಿಕರು ಅವಕಾಶ ಮಾಡಿಕೊಡಬಾರದು ಎಂದರು.
ನಗರರಭಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಅಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ ಜಾಹೀರಾತು ಶುಲ್ಕಗಳನ್ನು ಪಾವತಿಸಲು ಅರಿವು ಮೂಡಿಸುವ ಉದ್ದೇಶದಿಂದ ತೆರಿಗೆ ವಸೂಲಾತಿ ಅಂದೋಲನ’ವನ್ನು ಅಕ್ಟೋಬರ್ 3 ರಿಂದ 12ರ ವರೆಗೆ ಹಮ್ಮಿಕೊಳ್ಳಲಾಗಿದೆ. ಅದ್ದರಿಂದ ಈ ಸದರಿಯ ಅವಕಾಶವನ್ನ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯು ತೆರಿಗೆ ಪಾವತಿ ಮಾಡುವುದರಲ್ಲಿ ಹಿಂದೆ ಉಳಿದಿದೆ, ಸಾರ್ವಜನಿಕರು ಸಹ ಹೆಚ್ಚಾಗಿ ಸಹಕಾರ ನೀಡುತ್ತಿಲ್ಲ ಅದಕ್ಕಾಗಿ ಎಲ್ಲರೂ ತೆರಿಗೆ ಪಾವತಿ ಮಾಡಬೇಕು. ನಗರಸಭೆಯಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆಯಬೇಕು. ವರ್ತಕರು ಎರಡು ಮೂರು ವರ್ಷಗಳಿಂದ ತೆರಿಗೆ ಪಾವತಿ ಮಾಡುತ್ತಿಲ್ಲ, ಅಷ್ಟೇ ಅಲ್ಲದೆ ಪರವಾನಿಗೆ ತೆಗೆದುಕೊಳ್ಳದೆ ತೆರಿಗೆ ಕಟ್ಟದೆ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಾರೆ. ಹೀಗೆ ತೆರಿಗೆ ಕಟ್ಟದೆ ಅಂಗಡಿಗಳನ್ನು ತೆರೆಯುತ್ತಿದ್ದರೆ ಅಂತಹ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದ ಅವರು ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ತಿಳಿಸಿದರು.
ನೀರಿನ ತೆರಿಗೆ 5 ಕೋಟಿ, ಅಸ್ತಿ ತೆರಿಗೆ 7 ಕೋಟಿ, ವಾಣಿಜ್ಯ ಮಳಿಗೆ ತೆರಿಗೆ 3 ಕೋಟಿ ಸೇರಿದಂತೆ ಸುಮಾರು 15 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಇದೆ. ನಿವೇಶನ ನೀರು, ಕಟ್ಟಡ, ವ್ಯಾಪಾರ ಉದ್ಯಮ, ವಾಣಿಜ್ಯ ವಹಿವಾಟುನಂತಹ ತೆರಿಗೆಗಳನ್ನು ಪಾವತಿ ಮಾಡಲು ಸಾರ್ವಜನಿಕರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗುವಂತೆ ಫೋನ್ ಪೇ ಮತ್ತು ಗೂಗಲ್ ಪೇ ಮುಖಾಂತರ ಕೂಡ ಹಣ ಪಾವತಿ ಮಾಡಲು ಅವಕಾಶವನ್ನು ಸಹ ಮಾಡಲಾಗಿದೆ. ಅದು ಸಾಧ್ಯವಾಗಿಲ್ಲ ಎಂದರೆ ನಗರಸಭೆಯಲ್ಲಿ ನಗದು ಹಣ ನೀಡುವ ಮೂಲಕ ಪಾವತಿ ಮಾಡಬಹುದಾದ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g