May 15, 2024

MALNAD TV

HEART OF COFFEE CITY

ಜಾತ್ರೆಗೆ ಬಂದಿದ್ದ ವಿಚ್ಚೇದಿತ ಪತ್ನಿಯ ಕತ್ತುಸೀಳಿ ಬರ್ಬರ ಹತ್ಯೆ

1 min read

ಪ್ರೀತಿಸಿ ವಿವಾಹವಾಗಿ ದೂರವಾಗಿದ್ದ ಪತ್ನಿ ತವರು ಮನೆಗೆ ಜಾತ್ರೆಗೆ ಬಂದಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತಿ ಕೊಲೆ ಮಾಡಿದ್ದಾನೆ. ಬಟ್ಟೆ ಒಗೆಯಲು ಹೋದಾಗ ಹಿಂಭಾಲಿಸಿ ಬಂದು ಬರ್ಭರವಾಗಿ ಕೊಂದು ಭದ್ರಾ ಹೊಳೆಯಲ್ಲಿ ರಕ್ತದೊಕುಳಿ ಹರಿಸಿದ್ದಾನೆ.

ಪ್ರೀತಿಸುವಾಗಲೇ ಅತ್ಯಾಚಾರ ಎಸಗಿ ಫೋಕ್ಸೋ ಪ್ರಕರಣ ಹಾಕಿಸಿಕೊಂಡು ಅದೇ ಬಾಲಕಿಯ ವಿವಾಹವಾಗಿ ನಿತ್ಯ ಕಿರುಕುಳ ಕೊಟ್ಟು ದೂರಾಗಿದ್ದ ಪತಿ ಹೊಂಚು ಹಾಕಿ ತವರಿಗೆ ಮುಳಕಟ್ಟಮ್ಮ ಜಾತ್ರೆಗೆ ಬಂದಿದ್ದ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದ ಮೇಘನಾಳನ್ನು ಅದೇ ಗ್ರಾಮದ ಚರಣ್ ಪ್ರೀಸಿಸಿ ವಿವಾಹವಾಗಿದ್ದ ಅಪ್ರಾಪ್ತೆಯಾಗಿದ್ದ ಕಾರಣ ವಿವಾಹಕ್ಕೂ ಮೊದಲು ಅತ್ಯಾಚಾರ ಎಸಗಿದ್ದ ಕಾರಣ ಫೋಕ್ಸೋ ಪ್ರಕರಣ ದಾಖಲಾಗಿತ್ತು, ನಂತರ ಎರಡೂ ಮನೆಯವರು ಸೇರಿ ಇಬ್ಬರಿಗೂ ಮದುವೆ ಮಾಡಿದ್ದರು. ಕೆಲ ಕಾಲದ ಬಳಿಕ ನಿತ್ಯ ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ ಇದರಿಂದ ಬೇಸತ್ತ ಮೇಘನಾ ಮನೆಯವರು ಅವಳನ್ನು ಅಜ್ಜಿಯ ಮನೆ ಬಿಆರ್.ಪಿ ಗೆ ಕಳುಹಿಸಿದ್ದರು. ಕರಕುಚ್ಚಿಯಲ್ಲಿ ಮುಳಕಟ್ಟಮ್ಮ ಜಾತ್ರೆ ಇರುವ ಕಾರಣ ನಿನ್ನೆ ತವರು ಮನೆಗೆ ಬಂದಿದ್ದ ಅವಳು ಇಂದು ಹೊಳೆಯಲ್ಲಿ ಬಟ್ಟೆ ಹೊಗೆಯಲು ತೆರಳಿದ್ದ ವೇಳೆ ಹಿಂಬಾಲಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.ಸದ್ಯ ಆರೋಪಿ ಶರಣ್ ತಲೆಮರೆಸಿಕೊಂಡಿದ್ದು ಲಕ್ಕವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!