May 20, 2024

MALNAD TV

HEART OF COFFEE CITY

ಭಿಕ್ಷೆ ಬೇಡಿ ತಿನ್ನುತ್ತಿದ್ದ ಮಹಿಳೆಯ ಮುಖ ಜಜ್ಜಿ ಬರ್ಬರ ಹತ್ಯೆ

1 min read

 

 

ಸರ್ಕಾರಿ ಬಸ್ ನಿಲ್ದಾಣದ ಬಳಿ ಭಿಕ್ಷೆ ಬೇಡಿಕೊಂಡು ಬದುಕಿದ್ದ ವೃದ್ದೆಯನ್ನು ಕೀಚಕರು ಕಳೆದ ರಾತ್ರಿ ಮುಖವನ್ನು ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ 

ಮೂಡಿಗೆರೆ ಮೂಲದ ಕವಿತ ಎಂಬ ಮಹಿಳೆ ಹಲವು ವರ್ಷಗಳಿಂದ ಬಸ್ ನಿಲ್ದಾಣದ ಸುತ್ತಮುತ್ತ ಭಿಕ್ಷುಕಿಯಾಗಿ ಬೇಡಿ ತಿನ್ನುತ್ತಿದ್ದು ಕಳೆದ ರಾತ್ರಿ ಕೊಲೆ ಮಾಡಲಾಗಿದೆ. 

 

ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣದ ಸುತ್ತಮುತ್ತ ಭಿಕ್ಷೆ ಬೇಡುತ್ತ ರಸ್ತೆಯಲ್ಲಿ ಮಲಗುತ್ತಿದ್ದ ಅರವತ್ತು ವರ್ಷದ ವೃದ್ದೆಯನ್ನು ಕಳೆದ ರಾತ್ರಿ ಕಿರಾತಕರು ಮುಖವನ್ನು ಜಜ್ಜಿ ಕೊಲೆ ಮಾಡಿದ್ದಾರೆ. ಬಸ್ ನಿಲ್ದಾಣ ಹೊರಗೆ ಫುಟ್ ಬಾತ್ ರಸ್ತೆಯಲ್ಲಿ ಮಲಗುತ್ತಿದ್ದ ಮಹಿಳೆ ಹಳೇ ಮೂಡಿಗೆರೆ ಮೂಲದ ಕವಿತ ಎಂದು ಗುರುತಿಸಲಾಗಿದ್ದು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವವಾಗರಕ್ಕೆ ರವಾನಿಸಿದ್ದಾರೆ. ಘಟನೆ ಕಂಡು ಭಿಕ್ಷುಕಿಯನ್ನು ಕೊಲ್ಲುವ ಮನಸ್ಥಿತಿ ಕೀಚಕರಿಗೆ ಹೇಗೆ ಬಂತು ಎಂದು ಮತ್ತು ಕಾರಣ ಏನಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!