ಮೇ.1-2 ರಂದು ಬೇರುಗಂಡಿ ಮಠದ ಲ್ಲಿ ಧರ್ಮಜಾಗೃತಿ ಸಮಾರಂಭ
1 min readಚಿಕ್ಕಮಗಳೂರು: ತಾಲೂಕಿನ ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ಸಿದ್ಧೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ, ಗೋಪುರ ಕಳಸಾ ರೋಹಣ ಮತ್ತು ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ಧರ್ಮ ಜಾಗೃತಿ ಸಮಾರಂಭ ಮೇ 1 ಮತ್ತು 2ರಂದು ಎರಡು ದಿನಗಳ ಕಾಲ ಮಠದ ಆವರಣದಲ್ಲಿ ನಡೆಯಲಿದೆ ಎಂದು ಶ್ರೀಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮಾಚಗೊಂಡನಹಳ್ಳಿಯ ಶ್ರೀಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೇ 1ರಂದು ಶ್ರೀಮಠದಲ್ಲಿ ಗಂಗಾ ಪೂಜೆ, ಸಂಕಲ್ಪ ಪುಣ್ಯಾಹ, ಗಣಪತಿ ನಂದಿ ಅಷ್ಟಲಕ್ಷ್ಮೀ ಕಳಸ ಪಂಚಕಳಸ, ಏಕಾದಶರುದ್ರ ಕಳಸ, ಮಹಾಮೃತ್ಯುಂಜಯ ಕಳಸ, ದುರ್ಗಾಕಳಸ, ದಶದಿಕ್ಪಾಲಕರ ಕಳಸ ಪೂಜೆ, ಗಣಹೋಮ, ಆಯುಷ್ಯ ಹೋಮ ಜಯಾದಿ ಹೋಮ, ರಕ್ಷಘ್ನ ಹೋಮ ಸೇರಿದಂತೆ ವಿವಿಧ ಯಜ್ಞ ಪೂಜೆಗಳು ಅಂದು ಮಧ್ಯಾಹ್ನದಿಂದ ಜರುಗಲಿದೆ ಎಂದರು.
ಮೇ 2ರಂದು ಪ್ರಾಥಃಕಾಲದಲ್ಲಿ ಶ್ರೀ ಡಾ|ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮಿ ಸೋಮನಕಟ್ಟೆ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನ ಮಠ ನೊಣವಿನಕೆರೆ ಇವರ ನೇತೃತ್ವದಲ್ಲಿ ಶ್ರೀಸಿದ್ಧೇಶ್ವರಸ್ವಾಮಿ ಕರ್ತೃ ಗದ್ದುಗೆಗೆ ಏಕಾದಶ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಅಲಂಕಾರ ಪೂಜೆ, ರಾಜೋಪಚಾರ ಹಾಗೂ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳ ದ್ವಾದಶ ಪಟ್ಟಾಧಿಕಾರ ಸಂಭ್ರಮ ಅಂಗವಾಗಿ ಹರಿದ್ರಾಲೇಪನ ಮಂಗಲಾಭಿಷೇಕ ಪುಣ್ಯಸ್ನಾನಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.ಅದೇ ದಿನ ಬೆಳಿಗ್ಗೆ 10 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾ ಚಾರ್ಯ ಭಗವತ್ಪಾದರವರಿಂದ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಕಳಸಾರೋಹಣ ಹಾಗೂ ನೂತನವಾಗಿ ನಿರ್ಮಿಸಿರುವ ನಾಗಶ್ರೀ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.
ನಂತರ ನಡೆಯುವ ಧರ್ಮ ಜಾಗೃತಿ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಮಾರಂಭದ ಸಾನಿಧ್ಯವಹಿಸುವರು. ಶ್ರೀ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಸಮಾರಂಭ ಉದ್ಘಾಟಿಸು ವರು ಎಂದರು.ಸಮಾರಂಭದಲ್ಲಿ ಹುಲಿಕೆರೆ ದೊಡ್ಡ ಮಠದ ಶ್ರೀ ವಿರೂಪಾಕ್ಷಲಿಂಗ ಶೀವಾಚಾರ್ಯ ಸ್ವಾಮೀಜಿ, ಪಂಚಗೃಹ ಹಿರೇಮಠ ಶಿವಸಿದ್ಧ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಲಸ್ವಾಮಿ ಮಠದ ಗುರು ಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪ್ರಭುಕುಮಾರ್ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಸಿ.ಟಿ.ರವಿ, ಬಿ.ಬಿ,ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ, ಗಾಯತ್ರಿ ಶಾಂತೇಗೌಡ, ಜಿ.ಎಂ.ರಾಜಶೇಖರ ಸೇರಿ ದಂತೆ ಅನೇಕರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಶಿವಶಂಕರ್, ಎಚ್.ಎಂ.ಲೋಕೇಶ್, ಎಂ.ಆರ್. ಪೂರ್ಣೇಶ್ ಮೂರ್ತಿ, ವೈ.ಸಿ.ಹರೀಶ್, ಜಿ.ಎಂ.ರಾಜ ಶೇಖರ್, ರಾಜೇಶ್ ಆಲ್ದೂರು ಸೇರಿದಂತೆ ಅನೇಕರು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g