May 3, 2024

MALNAD TV

HEART OF COFFEE CITY

ನಿರಾಶ್ರಿತರು, ನಿರಾಶ್ರಿತ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಿ; ಬಿ.ಸಿ ಬಸವರಾಜ್

1 min read

ಚಿಕ್ಕಮಗಳೂರು: ನಿವೇಶನ ಆಶ್ರಯ ಇಲ್ಲದಂತಹ ಯಾರೇ ನಿರಾಶ್ರಿತರು ಇದ್ದರೂ ನಿರಾಶ್ರಿತ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ತಿಳಿಸಿದರು.
ನಗರಸಭೆ ವತಿಯಿಂದ ನಗರದ ರಾಮನಹಳ್ಳಿ ನಿರಾಶ್ರಿತ ಕೇಂದ್ರದಲ್ಲಿ ಡಿ-ನಲ್ಮ್ ಯೋಜನೆ ಅಡಿ ‘ವಿಶ್ವ ವಸತಿ ರಹಿತರ ದಿನದ ಆಚರಣೆ’ ಪ್ರಯುಕ್ತ ನಿರಾಶ್ರಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದವರು ಅವರು, ಕೇಂದ್ರ ಸರ್ಕಾರವು ನಿರಾಶ್ರಿತರಿಗಾಗಿ ಒಂದು ದಿನವನ್ನು ನಿಗಧಿ ಮಾಡಿ ಅವರ ದಿನಾಚರಣೆಯನ್ನು ಕೂಡ ಆಚರಣೆ ಮಾಡುತ್ತಿದ್ದೆ. ಬೀದಿಬದಿಯ ಬಸ್ ಸ್ಟ್ಯಾಂಡ್ ಗಳಲ್ಲಿ ಇರುವಂತಹ ನಿರಶ್ರತರನ ಗುರುತಿಸಿ ಅವರಿಗಾಗಿ ಆಚರಣೆ ಮಾಡುತ್ತಿರುವುದು ಸಂತೋಷದಾಯಕವಾಗಿದೆ ಎಂದರು.

ಆರೋಗ್ಯ, ಸ್ವಚ್ಛತೆ ಮತ್ತು ಅವರ ಆರೋಗ್ಯದ ಕಾಳಜಿಯನ್ನು ಅವರು ವಹಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯಾರೇ ನಿರಾಶ್ರಿತರು ಇದ್ದರು ಮತ್ತು ಸಾರ್ವಜನಿಕರು ನಗರದಲ್ಲಿ ಯಾರೇ ನಿರಾಶ್ರಿತರು ಕಂಡು ಬಂದರು ಅವರನ್ನು ಗುರುತಿಸಿ ನಗರಸಭೆಗೆ ತಿಳಿಸಿದರೆ ಅವರನ್ನು ಸಹ ಇಲ್ಲಿಗೆ ಕರೆತಂದು ಅವರಿಗೆ ಬೇಕಾದ ಸೌಲಭ್ಯವನ್ನು ನೀಡಲು ನಗರಸಭೆ ಬದ್ಧವಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಒಂದು ನಿರಾಶ್ರಿತ ಕೇಂದ್ರ ಇದೆ ಎಲ್ಲಾ ನಿರಾಶ್ರಿತರೂ ಇದರ ಉಪಯೋಗವನ್ನು ಪಡೆದುಕೊಳ್ಳಿ. ನಗರದಲ್ಲಿ ನಿರಾಶ್ರಿತರ ಕಡಿಮೆ ಇದೆ ಸಂಖ್ಯೆ ಅದು ಒಳ್ಳೆಯದೇ. ಆ ನಿಟ್ಟಿನಲ್ಲಿ ಯಾರೂ ಕೂಡ ಸೂರಿಲ್ಲದವರು ಬೀದಿಯಲ್ಲಿ ಮಲಗಬಾರದು ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ನಿವೇಶನ ರಹಿತರು ಆಶ್ರಯ ಯೋಜನೆ ಅಡಿಯಲ್ಲಿ ಅರ್ಜಿ ಕೊಟ್ಟರೆ ಜಿ ಪ್ಲಸ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತೇವೆ. ಅವರ ಕುಟುಂಬ ಮಟ್ಟದ ನಿರ್ವಹಣೆ ಉತ್ತಮ ರೀತಿಯಲ್ಲಿ ಇರಬೇಕು ಎಂಬದು ನಗರಸಭೆಯ ಉದ್ದೇಶವಾಗಿದೆ. ಇದರ ಮಾಹಿತಿಯ ಅರಿವಿಲ್ಲದವರಿಗೆ ಸಾರ್ವಜನಿಕರು ಸಹಕಾರ ನೀಡಿ, ತಿಳಿ ಹೇಳಬೇಕು ಎಂದರು. ಈ ಸಂದರ್ಭದಲ್ಲಿ ಅರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!