ಕೆ.ಎಸ್.ಆರ್.ಟಿ.ಸಿ ‘ಡಿ.ಸಿ’ಯಿಂದ ದಲಿತ ನೌಕರನ ಮೇಲೆ ದೌರ್ಜನ್ಯ: ಸಿ.ಎಂ ಗೆ ದೂರು
1 min readಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ, ಡಿ.ಸಿ ಕೆ.ಆರ್. ಬಸವರಾಜ್ ತಮ್ಮ ಅಧೀನದಲ್ಲಿರುವ ದಲಿತ ನೌಕರ ಸಂಜಯ್ ಮೇಲೆ ದೌರ್ಜನ್ಯ ಮಾಡಿ ನಿರಂತರ ಕಿರುಕುಳ ನೀಡುತ್ತಿದ್ದು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂವಿಧಾನ ಸಂರಕ್ಷಣಾ ವೇದಿಕೆ ಆರೋಪಿಸಿದೆ.
ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ತಮ್ಮ ಇಲಾಖೆಯಲ್ಲಿ ಕಾನೂನು ಶಾಖೆಯ ಕಿರಿಯ ಸಹಾಯಕ ದಲಿತರಾದ ಎಚ್.ವೈ. ಸಂಜಯ್ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದು, ತಿಂಗಳಿಗೆ 10000 ಮಾಮೂಲಿ ವಸೂಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ದೂರು ನೀಡಲು ನಗರ ಪೊಲೀಸ್ ಠಾಣೆಗೆ ತೆರಳಿದರೂ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಸ್ಪಂದಿಲ್ಲ, ಇದೇ ನವಂಬರ್ 27ಕ್ಕೆ ಘಟನೆ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ದೂರು ನೀಡುತ್ತೇವೆ ಅಲ್ಲದೇ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಹಾ ದಾಖಲಿಸುವುದಾಗಿ ದಲಿತ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g