ಕಾಡಾನೆ ಸೆರೆಗೆ ಆದೇಶ: ಒಂಟಿ ಸಲಗ ಹಿಡಿಯಲು ಕಾರ್ಯಾಚರಣೆ ಆರಂಭ
1 min readಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಇತ್ತೀಚೆಗೆ ಮೂವರನ್ನು ಬಲಿ ಪಡೆದ ನರಹಂತಕ ಕಾಡಾನೆಗಳನ್ನು ಸೆರೆ ಹಿಡಿಯುಲು ಮತ್ತೊಮ್ಮೆ ಆದೇಶವಾಗಿದೆ. ಮಲೆನಾಡಲ್ಲಿ ಮೂರು ಕಾಡಾನೆಗಳನ್ನು ಹಿಡಿಯಲು ಆದೇಶ ಹೊರಡಿಸಲಾಗಿದ್ದು ಇಂದಿನಿಂದಲೇ ನರಹಂತಕ ಕಾಡಾನೆ ಸೇರಿದಂತೆ ಮತ್ತೆರಡು ಕಾಡಾನೆಗಳ ಸೆರೆ ಕಾರ್ಯಾಚರಣೆ ಆರಂಭವಾಗಿದೆ.
ಮಲೆನಾಡು ಭಾಗದಲ್ಲಿ ಮೂವರನ್ನು ಬಲಿ ಪಡೆದ ಒಂಟಿ ಸಲಗ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ನಿರಂತರ ಕಾಡಾನೆ ದಾಳಿಯಿಂದ ತತ್ತರಿಸಿರುವ ಮೂಡಿಗೆರೆ ಜನರ ಆಕ್ರೋಶ, ಪ್ರತಿಭಟನೆ ಹಿನ್ನೆಲೆಯಲ್ಲಿ ಆನೆ ಸೆರೆಹಿಡಿಯಲು ಆದೇಶ ಮಾಡಲಾಗಿದೆ, ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರ್ ಅಳವಡಿಸಲು ಸಹಾ ಸೂಚಿಸಲಾಗಿದ್ದು ಸೆರೆ ಹಿಡಿದ ಆನೆಗಳನ್ನು ಭದ್ರಾ ಸಂರಕ್ಷಿತಾ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ, ಸಾಕಾನೆಗಳ ಮೂಲಕ ಒಂಟಿ ಸಲಗ ಸೆರೆಹಿಡಿಯುವ ಕಾರ್ಯಾಚರಣೆ ಇದೀಗ ಆರಂಭಗೊಂಡಿದೆ. ಈ ನಡುವೆ ಚಾರ್ಮಾಡಿ ಘಾಟಿ ಸುತ್ತಮುತ್ತ ಕಾಡಾನೆಗಳು ಮತ್ತೆ ಪ್ರತ್ಯಕ್ಷ ವಾಗಿವೆ, ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಫಲಕ ಹಾಕಲಾಗಿದ್ದು ಅದರಲ್ಲೂ ರಾತ್ರಿ ವೇಳೆ ಸಂಚಾರ ಮಾಡುವವರು ಅತ್ಯಂತ ಎಚ್ಚರವಾಗಿರಲೇಬೇಕಾಗಿದೆ. ಚಾರ್ಮಾಡಿಯ ಮಲಯ ಮಾರುತ ಬಳಿ ಪ್ರತ್ಯಕ್ಷವಾದ ಕಾಡಾನೆಗಳನ್ನು ಹರಸಾಹಸ ಪಟ್ಟು ಪಟಾಕಿ ಸಿಡಿಸಿ ಅರಣ್ಯ ಸಿಬ್ಬಂದಿಗಳು ಕಾಡಿಗಟ್ಟಿದ್ದಾರೆ, ಚಾರ್ಮಾಡಿ ಘಾಟಿಯ ಎರಡೂ ಬದಿಯಲ್ಲೂ ಸಾವಿರಾರು ಅಡಿ ಪ್ರಪಾತವಿದ್ದು ಆನೆ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g