ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ರೆ… ನಿಮ್ಮ ಮೇಲೆಯೇ ಕೇಸ್ ಬೀಳುತ್ತೆ ಯಾಕೆ ಗೊತ್ತಾ..?
1 min readಚಿಕ್ಕಮಗಳೂರು: ಕಾಡಾನೆಗಳು ನಿಮ್ಮ ಕುಟುಂಬದವರ ಜೀವ ತೆಗೆದರೂ ನಿಮ್ಮ ತೋಟ, ಬೆಳೆ ತುಳಿದು ನಷ್ಟ ಮಾಡಿದ್ರೂ , ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ರೆ ನಿಮ್ಮ ಮೇಲೆಯೇ ಬೀಳುತ್ತೆ ಕೇಸ್ ಯಾಕೆ ಗೊತ್ತಾ,,,,
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ಮೂಡಿಗೆರೆ ಸುತ್ತಮುತ್ತ ಆನೆಗಳ ಹಾವಳಿಯಿಂದ ಜನ ಸತ್ರು ನೀವು ಆಕ್ರೋಶ ಹೊರಹಾಕುವಂತಿಲ್ಲ, ಸೈಲೆಂಟಾಗಿ ಇರಬೇಕು , ಕಾಡಾನೆಗಳ ದಾಳಿಗೆ ತಿಂಗಳಿಗೊಬ್ರು ಸತ್ರು ನ್ಯಾಯಕ್ಕಾಗಿ ಮಾತ್ರ ಯಾರನ್ನೂ ಕೇಳಂಗಿಲ್ಲ, ಪ್ರತಿಭಟನೆಯಂತೂ ಮಾಡಂಗೆ ಇಲ್ಲ ಯಾಕೆ ಗೊತ್ತ ?! ಇತ್ತೀಚೆಗೆ ಆಲ್ದೂರಿನಲ್ಲಿ ರಸ್ತೆ ತಡೆದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಕ್ಕೆ 8 ಜನರ ಮೇಲೆ ಕೇಸ್ ಬಿದ್ದಿದೆ. ರಾಜ್ಯ ಹೆದ್ದಾರಿ ತಡೆದು ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದ್ದ ಜನರ ಮೇಲೆ ಇದೀಗ ಪ್ರಕರಣ ದಾಖಲಾಗಿದೆ, ನವೆಂಬರ್ 8ರಂದು ಆಲ್ದೂರು ಸಮೀಪ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ವೀಣಾ ಸಾವನ್ನಪ್ಪಿದ್ದರು, ಅಂದು ಇದನ್ನು ಖಂಡಿಸಿ ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದ್ದ ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ, ಕಾನೂನು ಭಂಗ, ಸರ್ಕಾರಿ ಕಚೇರಿಗೆ ನುಗ್ಗುವ ಯತ್ನ, ಸಾರ್ವಜನಿಕರಿಗೆ ತೊಂದರೆ ಅಂತ ಆಲ್ದೂರು ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ನ್ಯಾಯ ಕೇಳಿದ್ದೇ ತಪ್ಪಾ ಎಂಬಂತೆ ಪ್ರತಿಭಟನಾಕಾರರ ಪರಿಸ್ಥಿತಿಯಾಗಿದ್ದು ಆಲ್ದೂರು ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g