May 10, 2024

MALNAD TV

HEART OF COFFEE CITY

ಸಚಿವರು, ಶಾಸಕರ ಹೆಂಡ್ತೀರು ಬುರ್ಖಾ ಹಾಕ್ಕೊಂಡು ಮುಸ್ಲಿಮರ ಬೀದಿಗೆ ಹೋದ್ರು ಒಂದ್ ಓಟ್ ಬೀಳಲ್ಲ : ಪ್ರಮೋದ್ ಮುತಾಲಿಕ್

1 min read

ಇಂದಿನ ಸಚಿವರು-ಶಾಸಕರು ಹೆಂಡತಿಯರು ಬುರ್ಖಾ ಹಾಕಿಕೊಂಡು ಮುಸ್ಲಿಮರ ಏರಿಯಾಗಳಿಗೆ ಹೋದರೂ ಬಿಜೆಪಿಗೆ ಒಂದೇ ಒಂದು ಓಟು ಬರುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ಅಥವ ಇಂದಿನ ಕಾಂಗ್ರೆಸ್ ನಾಯಕರು ಇರುವುದೇ ಮುಸ್ಲಿಮರಿಗಾಗಿ. ಅವರ ಓಲೈಕೆಗಾಗಿ. ನಾಳೆ ಅವರ ಮಕ್ಕಳು, ಮೊಮ್ಮಕ್ಕಳು ಮುಸ್ಲಿಮರಾಗುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಈಗ ಮಾತ್ರ ಅಧಿಕಾರದ ದಾಹ ತೀರಿಸಿಕೊಳ್ಳಲು ಅವರ ಓಲೈಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಅದಕ್ಕೆ ಬಿಜೆಪಿಯವರು 108 ಕಾರಣಗಳನ್ನು ಹೇಳುತ್ತಾರೆ. ಅದರ ಅವಶ್ಯಕತೆ ಇಲ್ಲ. ದತ್ತಪೀಠದಲ್ಲಿ ಕೂಡಲೇ ಹಿಂದೂ ಅರ್ಚಕರನ್ನು ನೇಮಿಸಿ ರಾಜ್ಯದಲ್ಲಿ ಒಂದು ಒಳ್ಳೆಯ ವಾತಾವರಣ ನಿರ್ಮಿಸಿ ಎಂದು ಸಲಹೆ ನೀಡಿದ್ದಾರೆ. ಮೊನ್ನೆ ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣ, ಸಾರ್ವಜನಿಕ ಗಣೇಶೋತ್ಸವದ ಸಂದರ್ಭ ಹಾಗೂ ದತ್ತಪೀಠದ ವಿಚಾರದಲ್ಲೇ ಇರಬಹುದು, ಎಲ್ಲೋ ಒಂದು ಕಡೆ ಬಿಜೆಪಿಯವರು ನಮಗೂ ಮುಸ್ಲಿಮರ ಓಟು ಸಿಗಬಹುದು ಎಂದು ಸೆಕ್ಯುಲರ್ ಆಗಲು ಹೊರಟಿದ್ದಾರೆ ಎಂದು ಅನಿಸುತ್ತಿದೆ. ಇಂದಿನ ಶಾಸಕರು ಮಂತ್ರಿಗಳ ಹೆಂಡತಿಯರು ಬುರ್ಕಾ ಹಾಕಿಕೊಂಡು ಮುಸ್ಲಿಮರ ಏರಿಯಾದಲ್ಲಿ ಓಡಾಡಿದರೂ ನಿಮಗೆ ಒಂದು ಓಟು ಬೀಳಲ್ಲ ಎಂದು ನಾನು ಹೇಳುತ್ತೇನೆ. ಅದಕ್ಕೆ ಹಿಂದೂಗಳು ನಿಮ್ಮನ್ನ ಗೆಲ್ಲಿಸಿದ್ದೇವೆ. ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ಆಗ್ರಯಿಸಿದ್ದಾರೆ. ಇದೇ ವೇಳೆ, ಜಮ್ಮು-ಕಾಶ್ಮೀರದ ಶ್ರೀನಗರ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, 370ನೇ ವಿಧಿ ರದ್ದಾದ ಬಳಿಕ ಹಾಗೂ ತಾಲಿಬಾನ್ ಅಘ್ಘಾನಿಸ್ಥಾನವನ್ನ ವಶಕ್ಕೆ ಪಡೆದ ಬಳಿಕ ಜಮ್ಮು-ಕಾಶ್ಮೀರ ಆಂತರಿಕ ಭಯೋತ್ಪಾದಕರು ಮತ್ತೆ ಬಾಲ ಬಿಚ್ಚಿದ್ದಾರೆ. ಒಂದೇ ವಾರದಲ್ಲಿ 7 ಜನ ಹಿಂದೂಗಳ ಕೊಲೆ ಆಗಿದೆ. ಒಂದೇ ವರ್ಷಕ್ಕೆ 28 ಜನ ಹಿಂದೂಗಳ ಕೊಲೆಯಾಗಿದೆ. ಅವರಲ್ಲಿ ಮುಗ್ಧರು, ವೈದ್ಯರು, ಶಿಕ್ಷಕರಿದ್ದಾರೆ. ಹತಾಶರಾಗಿ ಈ ರೀತಿ ಕೊಲೆ ಮಾಡುವ ಮೂಲಕ 370 ವಿಧಿಯ ಸೇಡನ್ನ ತೀರಿಸಿಕೊಳ್ತಿದ್ದಾರೆ. ಸರ್ಕಾರ ಕೂಡಲೇ ಇಂತವರನ್ನ ಹುಡುಕಿ-ಹುಡುಕಿ ಹೊಡೆಯಬೇಕು, ಹೊಡೀತಿದೆ. ಆದರೆ, ತಾಲಿಬಾನಿನ ಪ್ರಕ್ರಿಯೆ ನಂತರದ ಬೆಳವಣಿಗೆ ಸರಿಯಾದ್ದಲ್ಲ, ಅಪಾಯಕಾರಿ ಇದೆ. ಕೂಡಲೇ ಕೇಂದ್ರ ಸರ್ಕಾರ ಮದ್ಯಪ್ರವೇಶ ಮಾಡಿ ಹದ್ದುಬಸ್ತಿನಲ್ಲಿ ಇಡಬೇಕೆಂದು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!