May 13, 2024

MALNAD TV

HEART OF COFFEE CITY

ನಿವೇಶನಕ್ಕೆ ಒತ್ತಾಯಿಸಿ ಆಹೋರಾತ್ರಿ ಧರಣಿ

1 min read

 

ಮೂಡಿಗೆರೆ: ಫಲ್ಗುಣಿ ಗ್ರಾಮ ಪಂಚಾಯಿತಿ ಸರ್ವೆನಂಬರ್ 249 ರಲ್ಲಿರುವ ಖಾಲಿ ಜಮೀನನ್ನು ಭೂರಹಿತರಿಗೆ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮನೆ ಮುಂಭಾಗದಲ್ಲಿ ನಿವೇಶನ ರಹಿತರು ಆಹೋರಾತ್ರಿ ಪ್ರತಿಭಟನೆ ನಡೆಯಿತು.ಫಲ್ಗುಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂರಹಿತ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದು, ಅವರುಗಳು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ಅಲ್ಲಿರುವ ಖಾಲಿ ಜಮೀನನ್ನು ನೀಡುವಂತೆ ನಿವೇಶನ ರಹಿತರು ಆಗ್ರಹಿಸಿದರು.

ಎಸ್‍ಸಿ,ಎಸ್‍ಟಿ ದೌರ್ಜನ್ಯ ಸಮಿತಿಯ ಜಿಲ್ಲಾ ಸದಸ್ಯ ಡಾ.ಶಿವಪ್ರಸಾದ್ ಮಾತನಾಡಿ, ಕಳೆದ 9 ತಿಂಗಳಿಂದ ಖಾಲಿ ನಿವೇಶನವನ್ನು 50 ಕುಟುಂಬಗಳ ನಿವೇಶನ ರಹಿತರಿಗೆ ನೀಡುವಂತೆ ಸಭೆಯಲ್ಲಿ ಒತ್ತಾಯಿಸುತ್ತಾ ಬಂದಿರುವುದಾಗಿ ತಿಳಿಸಿದರು.ಬಹುತೇಕ ಕಾರ್ಮಿಕರು ಲೈನಿನಲ್ಲಿದ್ದರೆ, ಮತ್ತೆ ಕೆಲವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ನಾವುಗಳೆಲ್ಲ ಮನೆನಿರ್ಮಿಸಿಕೊಳ್ಳಲು ನಿವೇಶನ ಕೇಳುತ್ತಿದ್ದೆವೆಯೇ ಹೊರತು ಬೇರೆನನ್ನೂ ಕೇಳುತ್ತಿಲ್ಲ ನಿವೇಶನ ನೀಡುವoರೆಗೂ ಧರಣಿಯನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.
ಎಸ್‍ಸಿ ಎಸ್ ಟಿ ದೌರ್ಜನ್ಯ ಸಮಿತಿಯ ತಾಲೂಕು ಘಟಕದ ಸದಸ್ಯರಾದ ಲೋಕವಳ್ಳಿ ಮಹಾಬಲ,ನಿವೇಶನ ರಹಿತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್.ವಿಜಯ್, ಹರೀಶ್ ಸಬ್ಬೇನಹಳ್ಳಿ ಸೇರಿದಂತೆ ನಿವೇಶನ ರಹಿತರು ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!