ಉಸ್ತುವಾರಿ ಕಾರ್ಯದರ್ಶಿ ಕಟಾರಿಯಾ ದಿಢೀರ್ ತಾಲೂಕು ಕಚೇರಿ ಭೇಟಿ
1 min readಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಇಂದು ಚಿಕ್ಕಮಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಂದಾಯ ಕಡತಗಳ ಡಿಜಿಟಲೀಕರಣ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಇಂದು ಕಚೇರಿಗೆ ಆಗಮಿಸುತ್ತಿದ್ದಂತೆ ಸರ್ ಪ್ರೈಸ್ ಕಾದಿತ್ತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಇಂದು ಕಚೇರಿ ಆರಂಭ ವಾಗುತ್ತಿದ್ದಂತೆ ದಿಢೀರ್ ಭೇಟಿ ನೀಡಿದರು. ಮೊದಲು ಅರ್ಜಿ ಸ್ವೀಕಾರ ಕೇಂದ್ರಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಬಗ್ಗೆ ಸಿಬ್ಬಂದಿಗಳಿಗೆ ಪ್ರಶ್ನಿಸಿದರು. ನಂತರ ರೆಕಾರ್ಡ್ ರೂಂ ಗೆ ತೆರಳಿ ಕಂದಾಯ ಇಲಾಖೆ ಕಡತಗಳ ಡಿಜಿಟಲೀಕರಣದ ನಡೆಯುತ್ತಿರುವುದನ್ನು ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಅವರು ರಾಜ್ಯದ 31 ಜಿಲ್ಲೆಗಳಲ್ಲಿ ಒಂದೊಂದು ಕೇಂದ್ರ ಸ್ಥಾಪಿಸಿ ಕಡತಗಳನ್ನು ಸ್ಕಾನ್ ಮಾಡಿ ಡಿಜಿಟಲ್ ವಾಲೆಟ್ ನಲ್ಲಿ ಇಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಹಂತ ಹಂತವಾಗಿ ರಾಜ್ಯಾದ್ಯಂತ ಈ ಕೇಂದ್ರಗಳನ್ನು ವಿಸ್ತರಿಸುವುದಾಗಿ ಹೇಳಿದರು ಕೆಲ ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸುವ ಆತಂಕ ವ್ಯಕ್ತಪಡಿಸಿದ ಕಟಾರಿಯಾ ಇದನ್ನು ತಡೆಯಲು ಈ ಡಿಜಿಟಲೀಕರಣ ಸಹಕಾರಿ ಎಂದರು. ಲಕ್ಷಾಂತರ ಫೈಲ್ ಗಳು ಸ್ಕಾನ್ ಮಾಡಲು ಸಿಬ್ಬಂದಿಗಳು ಕೊರತೆ ಇದ್ದು ಟೆಂಡರ್ ಕರೆದು ಶೀಘ್ರ ಕೆಲಸ ಮಾಡಿಸಲು ಸೂಚನೆ ನೀಡಿದರು. ಇದೇ ವೇಳೆ ನಿಧಾನಗತಿಯಲ್ಲಿ ಸ್ಕಾನಿಂಗ್ ನಡೆಯುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g