ಬಿಜೆಪಿಯಿಂದ ಕಪ್ಪುಪಟ್ಟಿ ಪ್ರದರ್ಶನ ಮಾಹಿತಿ: ಸಚಿವರಿಗೆ ವ್ಯಾಪಕ ಬಂದೋಬಸ್ಥ್
1 min readಚಿಕ್ಕಮಗಳೂರು: ಕಾಂಗ್ರೆಸ್ ಬಿಜೆಪಿ ನಡುವೆ ಪ್ರೊಟೆಸ್ಟ್ ವಾರ್ ನಡೆಯುತ್ತಿರುವ ಬೆನ್ನಲ್ಲೇ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಗೆ ಕಪ್ಪು ಪಟ್ಟಿ ಪ್ರದರ್ಶಿಸುವ ಮಾಹಿತಿ ಹಿನ್ನೆಲೆ ಭಾರೀ ಪೊಲೀಸ್ ಬಂದೋಬಸ್ತ್ ನಗರದಾದ್ಯಂತ ಕಲ್ಪಿಸಲಾಗಿತ್ತು.
ಇಂದು ನಗರದಲ್ಲಿ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸಮಾವೇಶ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಆಗಮಿಸಿದ ಹಿನ್ನೆಲೆ ನಗರದೆಲ್ಲೆಡೆ ವ್ಯಾಪಕ ಪೊಲೀಸ್ ಬಂದೋಬಸ್ಥ್ ಕಲ್ಪಿಸಲಾಗಿತ್ತು, ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶನ ಮಾಡುವ ಮಾಹಿತಿ ಇದ್ದ ಕಾರಣ ನೂರಾರು ಪೊಲೀಸರನ್ನು ನಗರದಾದ್ಯಂತ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ನಗರದ ಪ್ರವಾಸಿ ಮಂದಿರ, ತಾಲೂಕು ಕಚೇರಿ ಹಾಗೂ ಕುವೆಂಪು ಕಲಾ ಮಂದಿರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಲಾಗಿತ್ತು, ನಗರದ ಎಲ್ಲೆಲ್ಲೂ ಪೊಲೀಸರೇ ಪೊಲೀಸರು ಕಂಡು ಬರುತ್ತಿದ್ದರು. ಜಿಲ್ಲೆಯ ವಿವಿದೆಡೆ ಇಂದ ಪೊಲೀಸರನ್ನು ಕರೆಸಲಾಗಿತ್ತು.
ಆದರೆ ಬಿಜೆಪಿಯ ಯಾವುದೇ ಕಾರ್ಯಕರ್ತರು ಪ್ರತಿಭಟನೆ ಅಥವಾ ಕಪ್ಪುಪಟ್ಟಿ ಪ್ರದರ್ಶನ ಮಾಡಲು ಆಗಮಿಸಲಿಲ್ಲ, ಈ ನಡುವೆ ಬಿಜೆಪಿ ವತಿಯಿಂದ ಪತ್ರ ಚಳುವಳಿ ನಡೆಸುವ ಮಾಹಿತಿಯೊಂದು ಪತ್ರಕರ್ತರ ಗ್ರೂಪ್ ಗೆ ಹಾಕಲಾಗಿತ್ತು ಇದರಿಂದ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g