ಶಾಸಕ ತಮ್ಮಯ್ಯ ವಿರುದ್ಧ ಬಿಜೆಪಿಯಿಂದ ಪತ್ರ ಚಳುವಳಿ
1 min readಚಿಕ್ಕಮಗಳೂರು: ಕಪ್ಪುಪಟ್ಟಿ ಪ್ರದರ್ಶನ ಕೈ ಬಿಟ್ಟ ಬಿಜೆಪಿ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ವಿರುದ್ಧ ಪತ್ರ ಚಳುವಳಿ ನಡೆಸಿ ಕ್ಷೇತ್ರದ ಅಭಿವೃದ್ಧಿ ಗೆ ತಂದಿರುವ ಹಣದ ಬಗ್ಗೆ ಉತ್ತರ ಕೇಳಿ ಪ್ರಶ್ನೆಗಳ ಸುರಿಮಳೆಯ ಮನವಿ ಸಲ್ಲಿಸಿವೆ.
ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಗೆ ಕಪ್ಪುಪಟ್ಟಿ ಪ್ರದರ್ಶನ ಕೈಬಿಟ್ಟ ಬಿಜೆಪಿ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ವಿರುದ್ಧ ಪತ್ರ ಚಳುವಳಿ ನಡೆಸಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 9 ತಿಂಗಳಿನಿಂದ ಯಾವುದೇ ಹೊಸ ಕಾಮಗಾರಿ ನಡೆಯುತ್ತಿಲ್ಲ ಎನ್ನುತ್ತಲೆ ಕ್ಷೇತ್ರದ ಮತದಾರರ ಪರವಾಗಿ ಧ್ವನಿ ಎತ್ತುತ್ತಿದ್ದೇವೆ ಎಂದು ಪ್ರಶ್ನೆಗಳ ಸಾಲನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೀರಾ ? ಯಾವ ಕಾಮಗಾರಿಗಳನ್ನು ಆರಂಭಿಸಿದ್ದೀರಾ ? ನಿರುದ್ಯೋಗ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ? ರಸ್ತೆ , ಮೆಡಿಕಲ್ ಕಾಲೇಜಿಗೆ, ಕುಡಿಯುವ ನೀರಿನ ಯೋಜನೆಗೆ ನಿಮ್ಮ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ? ಹೀಗೆ ಪ್ರಶ್ನೆಗಳ ಸರಮಾಲೆಯನ್ನು ಹಾಕಿ ಕ್ಷೇತ್ರದ ಮತದಾರರಿಗೆ ಉತ್ತರ ಕೊಡಿ ನಾವು ಅವರ ಪರವಾಗಿ ನಿಮಗೆ ಪ್ರಶ್ನೆ ಕೇಳುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ಕೇಳಿದೆ. ಶಾಸಕರ ಕಚೇರಿಗೆ ತೆರಳಿ ಪ್ರಶ್ನೆಗಳ ಪಟ್ಟಿ ಇರುವ ಮನವಿ ಪತ್ರ ಕೊಡುವ ಮೂಲಕ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿ ಗೆ ತಮ್ಮಯ್ಯ ತಂದಿರುವ ಅನುದಾನ ಕುರಿತು ಮಾಹಿತಿ ಕೊಡಿ ಎಂದು ಕೇಳಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g