ಅಧ್ಯಕ್ಷರಿಗೆ ಬಿಜೆಪಿ ಸದಸ್ಯರಿಂದ ತಕ್ಕ ಪಾಠದ ವಾರ್ನಿಂಗ್..!
1 min read
ಚಿಕ್ಕಮಗಳೂರು: ಅಧ್ಯಕ್ಷರು ಮೊದಲು ವಿಶ್ವಾಸಮತ ನಿರ್ಣಯ ಮಾಡಿ ನಗರಸಭೆಗೆ ಪ್ರವೇಶ ಮಾಡಬೇಕು ಎಂದು ನಗರಸಭೆ ಸದಸ್ಯ ಟಿ ರಾಜಶೇಖರ್ ತಿಳಿಸಿದರು.
ಬಿಜೆಪಿ ಪಕ್ಷದ ನಿರ್ಣಯವನ್ನು ಧಿಕ್ಕರಿಸಿ ಕೈ ಸಿಗದೆ ಓಡಾಡುತ್ತಿರುವಂತಹ ಅಧ್ಯಕ್ಷರಿಗೆ ನಾವು ಸಹಕಾರ ನೀಡುವುದಿಲ್ಲ, ಮೊದಲು ಅವರು ಅವಿಶ್ವಾಸವನ್ನ ಮಂಡನೆ ಮಾಡಬೇಕು. ನಗರ ಸಭೆಗೆ ಪ್ರವೇಶ ಪಡೆಯಬೇಕು ಎಂದರೆ ಮೊದಲು ವಿಶ್ವಾಸಮತ ಗೆದ್ದು ಪ್ರವೇಶ ಪಡೆಯಬೇಕು. ಬಿಜೆಪಿಯ 17 ಜನ ಸದಸ್ಯರು ಇವರಿಗೆ ಯಾವುದೇ ರೀತಿಯ ಬೆಂಬಲವನ್ನ ನೀಡುವುದಿಲ್ಲ. ಅಧ್ಯಕ್ಷ ಸ್ಥಾನವನ್ನು ಉಪಯೋಗಿಸಿಕೊಳ್ಳುವುದಾಗಲಿ, ನಗರ ಸಭೆಯ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವುದಾಗಲಿ ಮಾಡಬಾರದು ಎಂದ ಅವರು ಬಿಜೆಪಿಗೆ ಮಾಡಿದ ದ್ರೋಹಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷರ ರಾಜೀನಾಮೆ ಕುರಿತಂತೆ ಹೈಡ್ರಾಮಾ ಮುಂದುವರೆದಿದೆ.
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ದಿ ವೇಣುಗೋಪಾಲ್ ಎರಡನೇ ಬಾರಿಯೂ ರಾಜೀನಾಮೆ ನೀಡಿ ವಾಪಸ್ ಪಡೆದ್ರಾ ಎಂಬ ಪ್ರಶ್ನೆ ಎದುರಾಗಿದೆ.
ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಎರಡು ತಿಂಗಳ ಹಿಂದೆ ರಾಜೀನಾಮೆ ಪತ್ರ ನೀಡಿದ್ದರು. ನಂತರ ರಾಜೀನಾಮೆ ಅಂಗೀಕಾರದ ಮೊದಲೆ ವಾಪಸ್ ಪಡೆದಿದ್ದರು.
ಅಕ್ಟೋಬರ್ ಮೊದಲ ವಾರದಲ್ಲಿ ಎರಡನೇ ಬಾರಿ ರಾಜೀನಾಮೆ ನೀಡಿದ್ದ ವರಸಿದ್ದಿ ವೇಣು ಗೋಪಾಲ್, ಎರಡನೇ ಬಾರಿಯೂ ರಾಜೀನಾಮೆ ಅಂಗೀಕಾರದ ಮೊದಲೇ ವಾಪಸ್ ಪಡೆದಿದ್ದಾರ ಎಂಬ ಪ್ರಶ್ನೆ ಎದುರಾಗಿದೆ.
ಇಂದು ನಗರ ಸಭೆಗೆ ಬರಬೇಕಿದ್ದ ಅಧ್ಯಕ್ಷರ ಫೋನ್ ಈಗ ನಾಟ್ ರೀಚಬಲ್ ನಲ್ಲಿ ಇದೆ.
ಸಿಟಿ ರವಿ ಅವರ ಸೂಚನೆಯಂತೆ ಎರಡನೇ ಬಾರಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ
ಮಾಜಿ ಸಚಿವ ಸಿ.ಟಿ.ರವಿಗೆ ಕೈಕೊಟ್ರಾ ಆಪ್ತ ವರಸಿದ್ದಿ ವೇಣುಗೋಪಾಲ್ ಎಂಬ ಮಾತು ಹರಿದಾಡುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g