ಸೂಕ್ತ ದಾಖಲೆಗಳಿಲ್ಲದ ವಾಹನಗಳ ಜಪ್ತಿ; ಶ್ರೀರಾಮ ಸೇನೆಯಿಂದ ಮನವಿ
1 min read
ಚಿಕ್ಕಮಗಳೂರು: ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡುವಂತೆ ಚಿಕ್ಕಮಗಳೂರು ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವಿಭಾಗಾದ್ಯಕ್ಷರು ರಂಜಿತ್ ಶೆಟ್ಟಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಚಿಕ್ಕಮಗಳೂರಿನ ಪ್ರವಾಸಿ ತಾಣವಾದ ದತ್ತಪೀಠ ಮುಳ್ಳಯನಗಿರಿ,ಭಾಗದಲ್ಲಿ ಪ್ರತಿನಿತ್ಯ ಸುಮಾರು 120 ಕ್ಕೂ ಹೆಚ್ಚು ಜೀಪ್ ಗಳು ಪುವಾಸಿಗರನ್ನು ಆನೇಕ ಸ್ಥಳಗಳಿಗೆ ಕರೆದೊಯ್ಯುತ್ತಿದ್ದು, ಈ ವಾಹನಗಳ ಚಾಲಕರು ಪ್ರವಾಸಿಗರಿಗೆ ದಬ್ಬಾಳಿಕೆ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ವಾಹನಗಳಿಗೆ ಯಾವುದೇ ದಾಖಲೆಗಳಿಲ್ಲ ಹಾಗೂ ಸಂಚಾರಕ್ಕೆ ಸೂಕ್ತವಲ್ಲದ ವಾಹನಗಳು ಸಂಚರಿಸುತ್ತಿವೆ.ಈ ವಿಷಯವಾಗಿ ಶ್ರೀ ರಾಮ ಸೇನೆಯು ಕಳೆದ 2 ವರ್ಷದ ಹಿಂದೆ ಹೋರಾಟ ಮಾಡಿದ್ದರ ಫಲವಾಗಿ 40 ವಾಹನಗಳನ್ನು ಪೋಲಿಸ್ ಇಲಾಖೆ ಜಪ್ತಿ ಮಾಡಿತ್ತು ಆದರೆ ಇದೀಗ ಮತ್ತೆ ಆ ವಾಹನಗಳು ಸಂಚರಿಸುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಪ್ರವಾಸಿಗರು ಹಾಗೂ ಅಲ್ಲಿನ ಸ್ಥಳಿಯರ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಹಿಂದೂ ಸಮಾಜಕ್ಕೆ ಮತ್ತು ಅವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಪ್ರೊ ಭಗವಾನ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ ಅವರು ಚಿಕ್ಕಮಗಳೂರು ನಗರಕ್ಕೆ ಬರದಂತೆ ನಿರ್ಬಂಧ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತೊಂದು ಮನವಿ ಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g