May 11, 2024

MALNAD TV

HEART OF COFFEE CITY

ಮೇನಕಾ ಗಾಂಧಿಯವರ ಪರವಾಗಿ ನಾವು ಹೋರಾಟಕ್ಕೂ ಸಿದ್ದ; ಕೆ.ವಿ ನಾಗೇಶ ಅಂಗೀರಸ

1 min read

ಚಿಕ್ಕಮಗಳೂರು: ಇಸ್ಕಾನ್ ಸಂಸ್ಥೆ ಮತ್ತು ಮೇನಕಾ ಗಾಂಧಿಯವರ ನಡುವಿನ ಸಣ್ಣ ಭಿನ್ನಾಭಿಪ್ರಾಯದಲ್ಲಿ ನಾವು ಮೇನಕಾ ಗಾಂಧಿಯವರ ಪರವಾಗಿ ಸದಾ ನಿಲ್ಲುತ್ತೇವೆ ಎಂದು ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ವಿ ನಾಗೇಶ ಅಂಗೀರಸ ತಿಳಿಸಿದರು.
ಚಿಕ್ಕಮಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮಾಹಿತಿ ನೀಡಿದರು.
ಸುಮಾರು ಏಳೆಂಟು ದಿನಗಳ ಹಿಂದೆಯಿಂದ ನಮ್ಮ ದೇಶದಲ್ಲಿ ಮೇನಕಾ ಗಾಂಧಿ ಮತ್ತು ಇಸ್ಕಾನ್ ಸಂಸ್ಥೆ ನಡುವೆ ಒಂದು ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಉಂಟಾಗಿರುವುದನ್ನ ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ನೋಡಿದ್ದೇವೆ. ಇಸ್ಕಾನ್ ಸಂಸ್ಥೆ ತನ್ನ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಕಲ್ಕತ್ತಾದ ವಕೀಲರಿಂದ 3 ಕೋಟಿ ಮಾನನಷ್ಟ ಮೊಕೊದ್ದಮೆಯನ್ನು ಹಾಕಲು ಮೇನಕಾ ಗಾಂಧಿಯವರ ವಿರುದ್ಧ ನೋಟೀಸ್ ಕಳಿಸಿದ್ದು, ಇದರ ಉದ್ದೇಶವೆಂದರೆ ಇಸ್ಕಾನ್ ದೊಡ್ಡ ಮಟ್ಟದಲ್ಲಿ ಹಣದ ಆಮೀಷ ತೋರಿಸಿ, ತನ್ನ ಮೇಲೆ ಬಂದಿರುವ ಆಪಾದನೆಯನ್ನು ಮುಚ್ಚಿ ಹಾಕಿ ಸಮಾಜದ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರ ಇದಾಗಿದೆ ಎಂದರು.
ಸ್ವಾತಂತ್ರ್ಯನಂತರದಲ್ಲಿ ಸಾಕುಪ್ರಾಣಿ ಸಂಕುಲ, ಗೋವು, ವನ್ಯಪ್ರಾಣಿ, ಪರಿಸರ ರಕ್ಷಣೆ ಮಾಡುವಲ್ಲಿ ಧ್ವನಿ ಎತ್ತಿದ್ದಲ್ಲದೆ, ಸರ್ಕಾರಗಳ ವಿರುದ್ಧ ಮತ್ತು ನ್ಯಾಯಾಲಯದಲ್ಲಿ ಪ್ರಬಲವಾಗಿ ಬಡಿದಾಡಿ ಯಶಸ್ಸನ್ನ ಸಾಧಿಸಿದ ಕೀರ್ತಿ ಮೇನಕಾ ಗಾಂಧಿಯವರದು. ದೇಶದ ವನ್ಯಪ್ರಾಣಿ, ಪರಿಸರ ಪ್ರಿಯರು ಮೇನಕಾ ಗಾಂಧಿಯವರಾಗಿದ್ದರಿಂದ, ಪ್ರಾಣಿಪ್ರಿಯರೆಲ್ಲರೂ ಅವರಿಗೆ ಸದಾ ಋಣಿಯಾಗಿರುತ್ತೇವೆ.
ಈ ಸಂದರ್ಭದಲ್ಲಿ ಮೇನಕ ಗಾಂಧಿಯವರ ಬೆನ್ನೇಲುಬಾಗಿ ನಾವು ನಿಲ್ಲಬೇಕು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಹೋರಾಟ ಪ್ರಾರಂಭವಾದರೆ ಸೂಕ್ತ ದಾಖಲೆಗಳನ್ನು ಸಂಗ್ರಹಣೆ ಮಾಡಿ ಧಾರ್ಮಿಕ ಸಂಸ್ಥೆಯ ಹೂನ್ನಾರಗಳೆನಿದೆಯೋ ಅವುಗಳ ವಿರುದ್ಧ ಪ್ರತಿ ಚಳುವಳಿಯನ್ನು ಪ್ರಾರಂಭ ಮಾಡುವುದಕ್ಕೆ ಸಣ್ಣಮಟ್ಟದ ಹೋರಾಟ ರೂಪಿಸುತ್ತೇವೆ ಇದನ್ನು ಸಮಾಜಕ್ಕೆ ತಿಳಿಸಬೇಕು ಎಂದರು. ಪ್ರಾಣಿ ಪಕ್ಷಿ ಪರಿಸರವನ್ನ ರಕ್ಷಿಸಲು ಹೋರಾಟ ಮಾಡುವಂತಹ ಹೋರಾಟಗಾರರನ್ನ ಬೆಂಬಲಿಸಬೇಕು ಎಂದು ಮಾಧ್ಯಮದವರೊಂದಿಗೆ ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!