ರಸ್ತೆ ಗುಂಡಿ ಮುಚ್ಚಿಸಿ ಬ್ಯಾನರ್ ಹಾರಿಸಿಕೊಂಡ ಶಾಸಕ : ಬ್ಯಾನರ್ ಕಂಡು ನಕ್ಕು ಸುಮ್ಮನಾದ ಜನರು
1 min readರಾಜಕಾರಣಿಗಳ ಪ್ರಚಾರದ ಘೀಳು ಯಾವ ಮಟ್ಟದ್ದು ಎಂದರೆ ಅದು ಹೇಳತೀರದು, ನಮ್ಮ ಶೃಂಗೇರಿ ಶಾಸಕರ ಈ ಬ್ಯಾನರ್ ನೋಡಿದ್ರೆ ನಗಬೇಕೊ, ತಮಾಷೆ ಅಂದುಕೊಳ್ಳಬೇಕೊ ಗೊತ್ತಿಲ್ಲ
ಕಾಂಗ್ರೆಸ್ ಶಾಸಕನ ಈ ಬ್ಯಾನರ್ ಪ್ರೇಮ ನೋಡಿದವರನ್ನು ಬೆರಗಾಗಿಸುವುದಂತೂ ಸತ್ಯ, ರಸ್ತೆ ಗುಂಡಿ ಮುಚ್ಚಿಸಿದ್ದೆ ಮಹಾ ಸಾಧನೆ ಎಂಬಂತೆ ಬ್ಯಾನರ್ ಹಾಕಿಸಿಕೊಂಡ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಪ್ರಚಾರಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಹೊಸ ರಸ್ತೆ ಮಾಡಿಸಿ ಬ್ಯಾನರ್ ಹಾಕಿಸಿಕೊಂಡದ್ರು ಇಷ್ಟೊಂದು ಟ್ರೋಲ್ ಆಗ್ತಿರ್ಲಿಲ್ಲಾ ಆದರೆ ಪುಣ್ಯಾತ್ಮ ರಸ್ತೆಗೆ ಬಿದ್ದ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಳ್ಳೋದಾ,,,! ಪ್ರಚಾರದ ಘೀಳಾ ಈ ಮಟ್ಟಕ್ಕಾ ಎಂದು
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರ ಬ್ಯಾನರ್ ಪ್ರೇಮಕ್ಕೆ ಜನರ ನಗುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಂಡಿರುವ ಶಾಸಕ ಟಿ.ಡಿ. ರಾಜೇಗೌಡ 6 ವರ್ಷದಿಂದ ಕೊಪ್ಪ ಪ.ಪಂ.ಗೆ ಒಂದು ರೂಪಾಯಿ ಅನುದಾನ ನೀಡಿಲ್ಲವಂತೆ, ಇದೀಗಶಾಸಕರ ಬ್ಯಾನರ್ ಪ್ರೇಮಕ್ಕೆ ಬಿಕ್ಕಿ ಬಿಕ್ಕಿ ನಗುತ್ತಿರೋ ಕೊಪ್ಪ ಜನತೆ ರಾಜಕಾರಣಿಗಳ ಈ ಪ್ರಚಾರ ಪ್ರೀತಿ ಕಂಡು ಬೆರಗಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g