April 30, 2024

MALNAD TV

HEART OF COFFEE CITY

ನಾನು ದತ್ತಮಾಲೆ ಹಾಕಿಲ್ಲ : ಕಾಂಗ್ರೆಸ್ ಮುಖಂಡರಿಗೆ ಶಾಸಕ ಎಚ್ ಡಿ ತಮ್ಮಯ್ಯ ಸ್ಪಷ್ಟನೆ

1 min read

ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ದತ್ತಮಾಲೆ ಹಾಕಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದ್ದು, ಭ್ರಮ ನಿರಸನಗೊಂಡ ಬಿಜೆಪಿಗರು ರಾಜಕೀಯ ದುರುದ್ದೇಶದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಎಚ್.ಡಿ ತಮ್ಮಯ್ಯ ದತ್ತಮಾಲೆ ಧರಿಸಿದ್ದಾರೆ ಎಂಬ ಮಾಹಿತಿ ಗೊತ್ತಾದ ತಕ್ಷಣ ಅವರ ಜೊತೆಯಲ್ಲೇ ಇದ್ದ ನಾನು ಅವರನ್ನು ವಿಚಾರಿಸಿದೆ, ಇಲ್ಲ ಅದು ಸುಳ್ಳು ಸುದ್ದಿ ಎಂದು ತಮ್ಮಯ್ಯ ಹೇಳಿದರು. ಅಲ್ಲದೇ ಅವರ ಕೊರಳಲಿದ್ದ ಮಾಲೆ ಬಗ್ಗೆ ವಿಚಾರಿಸಿದಾಗ ಅದು ರುದ್ರಾಕ್ಷಿ ಮಾಲೆ , ದತ್ತಮಾಲೆ ಅಲ್ಲ ಎಂದು ಶಾಸಕರು ಹೇಳಿದರು ಎಂದು ಎಂ.ಎಲ್ ಮೂರ್ತಿ ಮಲ್ನಾಡ್ ಟಿ.ವಿ ಗೆ ತಿಳಿಸಿದರು. ಈ ಬಗ್ಗೆ ಖುದ್ದು ಶಾಸಕ ತಮ್ಮಯ್ಯ ಮಾತನಾಡಿ ಎಲ್ಲದಕ್ಕೂ ನಾಳೆ ಉತ್ತರ ನೀಡುತ್ತೇನೆ ನಮ್ಮ ನಾಯಕರೇ ಮಾತನಾಡಿದ ಮೇಲೆ ನಾನು ಸದ್ಯ ಏನು ಹೇಳುವುದಿಲ್ಲ ಎಂದು ಶಾಸಕ ತಮ್ಮಯ್ಯ ತಿಳಿಸಿದರು. ಅದು ದತ್ತಮಾಲೆ ಅಲ್ಲ ಸುಬ್ರಹ್ಮಣ್ಯ ಸ್ವಾಮಿ ದೇವರ ಷಷ್ಠಿ ಹಿನ್ನೆಲೆಯಲ್ಲಿ ಬರಿಗಾಲಿನಲ್ಲಿ ನಡೆದಾಡುತ್ತಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ, ಧಾರ್ಮಿಕ ಆಚರಣೆಗಾಗಿ ಶಾಸಕ ಎಚ್ ಡಿ ತಮ್ಮಯ್ಯ ದತ್ತಮಾಲೆ ಹಾಕಿದರೂ ತಪ್ಪಿಲ್ಲ ಆದರೆ ಕೇವಲ ಮತಬ್ಯಾಂಕ್ ಗಾಗಿ ದತ್ತಮಾಲೆ ಧರಿಸುವವರು ಇದ್ದಾರೆ ತಮ್ಮಯ್ಯ ದತ್ತಮಾಲೆ ಹಾಕಿದ್ದಾರೆ ಎಂಬುದು ಕೇವಲ ವದಂತಿ ಅಷ್ಟೇ ಎಂದು ಎಂ.ಎಲ್.ಎಂ ತಿಳಿಸಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!