May 9, 2024

MALNAD TV

HEART OF COFFEE CITY

ಪ್ರತಾಪ್ ಸಿಂಹ ಜಾಗದಲ್ಲಿ ನಾನಿದ್ದರೂ ಪಾಸ್ ಕೊಡುತ್ತಿದೆ: ಸಿ.ಟಿ ರವಿ

1 min read

ಚಿಕ್ಕಮಗಳೂರು: ನಮ್ಮ ಊರಿನವರು ಪಾರ್ಲಿಮೆಂಟ್ ನೋಡಬೇಕು ಎಂದಾಗ ನಾನೂ ಕೂಡಾ ಪಾಸ್ ಕೊಡುತ್ತಿದ್ದೆ ಅವರು ಒಳ್ಳೆಯವನೋ,,, ಕೆಟ್ಟವನೋ,,, ನೋಡುತ್ತಿರಲಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ ಪ್ರತಾಪ್ ಸಿಂಹರನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಸತ್ ಭವನದಲ್ಲಿ ನಡೆದ ಘಟನೆ ಸಂಬಂಧ ಕಾಂಗ್ರೆಸ್ಸಿನ ಸಕ್ರಿಯತೆ ನೋಡುದ್ರೆ ಟೂಲ್‍ಕಿಟ್ ರಾಜಕೀಯದ ಅನುಮಾನ ಇದೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ. ಇದಕ್ಕೆ ಅನಿಸುತ್ತೆ ಐಟಿ, ಸಿಬಿಐ, ಇಡಿ ದಾಳಿ ಅಂದ್ರೆ ಕಾಂಗ್ರೆಸ್ ಭಯಗೊಳ್ಳೋದು, ಧೀರಜ್ ಸಾಹು ಅಂತವರು ನೂರಾರು ಜನ ಕಾಂಗ್ರೆಸ್ಸಿಗರ ಬಳಿ ಇದ್ದಾರೆ ಇದೆಲ್ಲಾ ಲೋಕಸಭೆ ಚುನಾವಣೆಗೆ ಸಂಗ್ರಹಿಸಿಟ್ಟಿರುವ ಹಣ ಮಾಯೆ ಅನಿಸುತ್ತೆ ಮೋದಿ ಪ್ರಧಾನಿ ಆಗೋದನ್ನ ತಪ್ಪಿಸಬೇಕು ಅಂತ ಇದೆಲ್ಲಾ ಷಡ್ಯಂತ್ರ ನಡೆದಿರಬಹುದು. ಅಪಪ್ರಚಾರ, ಕಳ್ಳಹಣದ ಜೊತೆ ವಿದೇಶಿ ಶಕ್ತಿಗಳ ಜೊತೆ ಶಾಮೀಲಾಗಿರುವ ಸಂಶಯ ಇದೆ ಎಂದಿರುವ ಸಿ.ಟಿ ರವಿ, ಎಲ್ಲದರ ಪಾರ್ಟ್ ಅಂಡ್ ಪಾರ್ಶುವಲ್ ಆಗಿ ಇದೆಲ್ಲಾ ನಡೆದಿರುವ ಸಂಶಯ ಇದೆ.
ಪಾರ್ಲಿಮೆಂಟ್ ನೋಡ್ತೀವಿ ಪಾಸ್ ಕೊಡಿ ಅಂದ್ರೆ ಕೊಡ್ತಾರೆ ಪ್ರತಾಪ್ ಸಿಂಹ ಜಾಗದಲ್ಲಿ ನಾನೇ ಇದ್ದರೂ ಕೊಡಿಸುತ್ತಿದ್ದೆ. ಭದ್ರತಾ ಲೋಪ ಆಗಿರೋದನ್ನ ಸಮರ್ಥನೆ ಮಾಡಿಕೊಳ್ಳೋದಿಲ್ಲ ಎಂದಿರುವ ರವಿ ಶಿಫಾರಸ್ಸು ಮಾಡುವಾಗ ಒಳ್ಳೆಯವನೋ… ಕೆಟ್ಟವನೋ ಅಂತ ಗುರುತಿಸೋ ಐ ಸ್ಕ್ಯಾನರ್ ಯಾರ ಬಳಿಯೂ ಇರಲ್ಲ , ಘೋಷಿತ ಅಪರಾಧಿಗೆ ಶಿಫಾರಸ್ಸು ಮಾಡಿದ್ರೆ ಅಪರಾಧನವಾಗುತ್ತೆ, ಊರಿನವರು ಪಾರ್ಲಿಮೆಂಟ್ ನೋಡ್ಬೇಕು ಅಂದ್ರೆ ನಾನು,ನೀವು, ಸಿದ್ದರಾಮಯ್ಯನವರೂ ಪಾಸ್ ಕೊಡ್ತಾರೆ. ಒಳ್ಳೆಯವನೋ… ಕೆಟ್ಟವನೋ ನಮಗೆ ಸಂಬಂಧವಿಲ್ಲ, ಇದರ ಹಿಂದಿನ ಶಕ್ತಿ ಯಾರು, ಯಾರ ಜೊತೆ ಸಂಬಂಧವಿದೆ ಅನ್ನೊ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!