ದತ್ತಮಾಲೆ ಹಾಕುತ್ತಾರಾ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ..! ಈ ಬಗ್ಗೆ ಅವರು ಹೇಳಿದ್ದೇನು..?
1 min readಚಿಕ್ಕಮಗಳೂರು: ನಾನು ಈ ಬಾರಿ ದತ್ತಮಾಲೆ ಹಾಕೋದು ಇನ್ನೂ ನಿರ್ಧಾರ ಮಾಡಿಲ್ಲ , ದೇವರು ಯಾವ ರೀತಿ ಮನಸ್ಸು ಕೊಡುತ್ತಾನೊ ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಶಾಸಕ ಎಚ್.ಡಿ ತಮ್ಮಯ್ಯ.
ಸಂಘ ಪರಿವಾರ ಪ್ರಯೋಜಿತ ದತ್ತಮಾಲೆ ಅಭಿಯಾನಕ್ಕೆ ನಾಳೆ ಚಾಲನೆ ದೊರೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ನಾಳೆ ರಾಜ್ಯದ ವಿವಿದೆಡೆ ದತ್ತ ಭಕ್ತರು ಮಾಲಾಧಾರಣೆ ಮಾಡಲಿದ್ದಾರೆ. ಈ ನಡುವೆ ಕುತೂಹಲ ಒಂದು ಚಿಕ್ಕಮಗಳೂರು ಜನರಿಗೆ ಕಾಡುತ್ತಿತ್ತು ಕ್ಷೇತ್ರದ ಶಾಸಕ ಎಚ್ಡಿ ತಮ್ಮಯ್ಯ ದತ್ತಮಾಲೆ ಹಾಕುತ್ತಾರಾ ಇಲ್ಲವಾ ಎಂಬುದು ,, ಹೌದು ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಮ್ಮಯ್ಯ ಪ್ರತಿವರ್ಷ ದತ್ತಮಾಲೆಯನ್ನು ಕಡ್ಡಾಯವಾಗಿ ಹಾಕುತ್ತಿದ್ದರು ಆದರೆ ಈ ಬಾರಿ ಅವರು ಕಾಂಗ್ರೆಸ್ ನಿಂದ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಈ ಬಾರಿಯೂ ಅವರು ದತ್ತಮಾಲೆ ಹಾಕುತ್ತಾರಾ ಎಂಬ ಪ್ರಶ್ನೆ ಬಹಳಷ್ಟು ಜನರನ್ನು ಕಾಡುತ್ತಿತ್ತು, ಇದೀಗ ಖುದ್ದು ಎಚ್.ಡಿ ತಮ್ಮಯ್ಯ ನವರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆದರೆ ಸ್ಪಷ್ಟವಾಗಿ ತಾವು ದತ್ತಮಾಲೆ ಹಾಕುವುದಿಲ್ಲ ಎಂದು ಹೇಳಿಲ್ಲ ,, ಹಾಕುತ್ತೇನೆ ಎಂದು ಸಹಾ ಹೇಳಿಲ್ಲ. ಕೇವಲ ನೋಡೋಣ ಎಂದಷ್ಟೇ ಹೇಳಿ ಜನರು ಕುತೂಹಲವನ್ನ ಇನ್ನೂ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದಾರೆ ದತ್ತಮಾಲೆ ಹಾಕುವುದರ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದಿರುವ ಶಾಸಕ ತಮ್ಮಯ್ಯ ದೇವರು ಯಾವ ರೀತಿ ಹೇಳುತ್ತಾನೋ ನೋಡೋಣ ಎಂದು ಹೇಳುವ ಮೂಲಕ ಸ್ಪಷ್ಟವಾಗಿ ತಾವು ಹಾಕುವುದಿಲ್ಲ ಎನ್ನದಿರುವುದು ಕುತೂಹಲವನ್ನು ಮುಂದುವರೆಯುವಂತೆ ಮಾಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g