ಹದೃಯ ಶಸ್ತ್ರ ಚಿಕಿತ್ಸೆಯಲ್ಲಿ ‘EVH’ ತಂತ್ರಜ್ಞಾನ ಬಳಕೆ ಯಶಸ್ವಿ: ಡಾ. ವಿಕ್ರಮ್ ಎಂ ಜೆ
1 min readಚಿಕ್ಕಮಗಳೂರು: ಶಿವಮೊಗ್ಗ ನಗರದಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಠಿಣವಾದ ಹದೃಯದ ಶಸ್ತ್ರ ಚಿಕಿತ್ಸೆಗೆ EVH (Endoscopic Vessels Harvesting Technique) ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಕ್ರಮ್ ಎಂ ಜೆ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 57 ವರ್ಷದ ಸುಮಿತ್ರಾ ಎಂಬುವವರು ಎದೆ ನೋವು ಮತ್ತು ಎಡ ಹಾಗೂ ಬಲ ಕೈಗಳ ಸೆಳೆತದಿಂದ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ವೈದ್ಯರು ಹೃದಯದ Bypass ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು. ಕಳೆದ ತಿಂಗಳ 24 ತಾರೀಖೀನಂದು ತುರ್ತಾಗಿ Off Pump Bypass ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಯಾದ ನಂತರ ರೋಗಿಯು ತುಂಬಾ ಆರೋಗ್ಯವಂತರಾಗಿದ್ದಾರೆ. ಮದ್ಯ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಈ EVH Technique ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
EVH ನ ಪ್ರಯೋಜನಗಳು
- ಶಸ್ತ್ರ ಚಿಕಿತ್ಸೆಯ ನಂತರ ಯಾವುದೇ ಗಾಯದ ಗುರುತು ಹಾಗೂ ಅಡ್ಡಪರಿಣಾಮಗಳಿರುವುದಿಲ್ಲಾ
- “ನೋ ಟಚ್” ತಂತ್ರಜ್ಞಾನಕ್ಕೆ ಹೋಲಿಸಿದರೆ EVH ವಿಧಾನವು ಸಮಾನವಾದ ವಾಹಿನಿಯ ಗುಣಮಟ್ಟವನ್ನು ಹೊಂದಿದೆ
- ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಿರುತ್ತದೆ
- ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಆಸ್ಪತ್ರೆಯ ವಾಸ್ತವ್ಯದ ಅವಧಿಯು ಕಡಿಮೆಯಾಗಿರುತ್ತದೆ (ಶಸ್ತ್ರಚಿಕಿತ್ಸೆಯ ಆಧಾರದ ಮೇಲೆ)
- ಶಸ್ತ್ರಚಿಕಿತ್ಸೆಯ ನಂತರ ಗಾಯಕ್ಕೆ ಸಂಬಂಧಿಸಿದ ಮತ್ತು ರೋಗಿಯು ಮರು ಧಾಖಲಾತಿಯ ಪ್ರಮಾಣವು ಕಡಿಮೆಯಾಗಿರುತ್ತದೆ.
- ಬೇರೆ ವಿಧಾನಗಳಿಗಿಂತ EVH ನ ಕಾರ್ಯ ವೈಖರೀಯು ಅತ್ಯುತಮವಾಗಿರುತ್ತದೆ.
ಈ ಕ್ಲಿಷ್ಠಕರವಾದ ಶಸ್ತ್ರಚಿಹಿತ್ಸೆಯಲ್ಲಿ ಡಾ. ವಿಕ್ರಮ್ ಎಂ ಜೆ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞವೈದ್ಯರು, ಅರವಳಿಕೆ ತಜ್ಞವೈದ್ಯರಾದ ಡಾ. ರಾಮಸುಂದರ, ಸಹಾಯಕ ಫಿಜಿಸಿಯನ್ ತಜ್ಞರಾದ ಚೆನ್ನಬಸವ ಹೆಚ್ ಬಿ ಹಾಗೂ ಶೂಸೂಷಕಿಯರು ಭಾಹವಹಿಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೂಚನೆ: ಡಾ. ವಿಕ್ರಮ್ ಎಂ ಜೆ ಯವರು ಪ್ರತಿ ತಿಂಗಳು 4ನೇ ಬುಧವಾರದಂದು ಕೆಆರ್ ಎಸ್ ಆಸ್ಪತ್ರೆಯಲ್ಲಿ ಓಪಿಡಿ ಸೇವೆಗಳಲ್ಲಿ ಲಭ್ಯರಿರುತದತಾರೆ ಹಾಗೂ ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಿಂದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಸಹ ಒದಗಿಸುತ್ತದೆ. ಉಚಿತ ಆಂಬ್ಯುಲೆನ್ಸ್ ಸೇವೆಗಾಗಿ ಕರೆಮಾಡಿ 74067 98698 ಎಂದು ಮಾಹಿತಿ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g