ಸಂಸತ್ ದಾಳಿಯ ಹಿಂದಿನ ಶಕ್ತಿ ಹಾಗೂ ಷಡ್ಯಂತ್ರ್ಯ ಶೀಘ್ರದಲ್ಲೇ ಹೊರಬೀಳಲಿದೆ: ಶೋಭಾ ಕರಂದ್ಲಾಜೆ
1 min readಚಿಕ್ಕಮಗಳೂರು: ಸಂಸತ್ ಮೇಲಿನ ದಾಳಿಯ ಹಿಂದಿನ ಶಕ್ತಿ ಹಾಗೂ ಷಡ್ಯಂತ್ರ್ಯ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನದ ದಾಳಿ ಬಗ್ಗೆ ತನಿಖೆಯನ್ನ ಸ್ಪೀಕರ್ ನೇತೃತ್ವದಲ್ಲಿ ಮಾಡಲಾಗುತ್ತಿದೆ, ಪಾರ್ಲಿಮೆಂಟ್ ಗೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರು ವಾರಸ್ಸುದಾರರು. ಗಂಭೀರ ತನಿಖೆ ಮಾಡುತ್ತಿದ್ದೇವೆ ಎಂದು ಅವರೇ ಹೇಳಿದ್ದಾರೆ, ರಾಷ್ಟ್ರೀಯ ತನಿಖಾ ದಳದ ಎಜೆನ್ಸಿಗಳು, ಪಾರ್ಲಿಮೆಂಟ್ ಒಳಗಿನ ಭದ್ರತಾ ವ್ಯವಸ್ಥೆ ತನಿಖೆ ಮಾಡ್ತಿದೆ, ಸದನ ನಢಯುವ ಸಂದರ್ಭ ಅಧಿಕಾರಿಗಳು ಸದನದ ಒಳಗೆ ಬರೋದು ಕಷ್ಟವಾಗಿತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇವತ್ತು-ನಾಳೆ ರಜೆ ಇದೆ, ಎಲ್ಲಾ ರೀತಿಯಲ್ಲೂ ತನಿಖೆ ಮಾಡ್ತೀವಿ ಅಂತ ಸ್ಪೀಕರ್ ಹೇಳಿದ್ದಾರೆ.
ಅಪರಾಧಿಗಳು ಯಾರು ಅವರು ಸಿಕ್ಕಿ ಬಿದ್ದಿದ್ದಾರೆ, ಝಾ ಎಂಬಾತ ಎಲ್ಲರ ಮೊಬೈಲ್ ಸಂಗ್ರಹಿಸಿ ಓಡಿ ಹೋಗಿದ್ದ, ಆತನೂ ಅರೆಸ್ಟ್ ಆಗಿದ್ದಾನೆ. ಶೀಘ್ರದಲ್ಲಿ ಘಟನೆ ಹಿಂದಿನ ಶಕ್ತಿ ಹಾಗೂ ಷಡ್ಯಂತ್ರ ಹೊರಬರಲಿದೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g