May 20, 2024

MALNAD TV

HEART OF COFFEE CITY

ಇಂದಿನಿಂದ ದತ್ತಮಾಲೆಗೆ ಅಧಿಕೃತ ಚಾಲನೆ : ಮಾಲೆಧರಿಸಿದ ಸಿ.ಟಿ ರವಿ

1 min read

ದತ್ತಮಾಲೆ ಅಂಗವಾಗಿ ಇಂದು ನೂರಾರು ದತ್ತಭಕ್ತರು ದತ್ತಮಾಲಾಧಾರಣೆ ಮಾಡಿದರು. ಮಾಜಿ ಶಾಸಕ ಸಿ.ಟಿ.ರವಿ, ಭಜರಂಗದಳ ಮುಖಂಡ ರಘು ಸಕಲೇಶಪುರ ಸೇರಿದಂತೆ ಪ್ರಮುಖರು ಮಾಲೆ ಧರಿಸಿದರು.

ಈ ಬಾರಿಯ ದತ್ತಮಾಲೆ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ. ನಗರದ ಕಾಮಧೇನು ಗಣಪತಿ ದೇವಾಲಯ ಆವರಣದಲ್ಲಿ ನೂರಾರು ದತ್ತಭಕ್ತರು ಮಾಲಾಧಾರಣೆ ಮಾಡಿದರು. ಮಾಜಿ ಶಾಸಕ ಸಿ.ಟಿ ರವಿ ಸೇರಿದಂತೆ ಸಂಘ ಪರಿವಾರದ ಮುಖಂಡರಾದ ರಘು ಸಕಲೇಶಪುರ, ಆರ್‌ಡಿ ಮಹೇಂದ್ರ ಸೇರಿದಂತೆ ಹಲವು ಪ್ರಮುಖರು ಮಾಲೆ ಧರಿಸಿದರು. ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ ದತ್ತಭಕ್ತರು ದತ್ತಾತ್ರೇಯ ಸ್ತೋತ್ರ ಹೇಳುತ್ತಾ ಭಜನೆ ಮಾಡುತ್ತಾ ಕೇಸರಿ ಶಾಲು ಧರಿಸಿ ಇಂದಿನಿಂದ ವೃತ ಆರಂಭಿಸಿದರು. ಡಿಸೆಂಬರ್ 26ರ ದತ್ತಜಯಂತಿ ಕೊನೆ ದಿನದವರೆಗೂ ಮಾಲೆ ಧರಿಸಿ ನಿತ್ಯ ಪೂಜೆ , ಭಜನೆ ಕೈಗೊಳ್ಳಲಿದ್ದಾರೆ. ಕಾಮಧೇನು ಗಣಪತಿ ದೇಗುಲ ಆವರಣದಲ್ಲಿ ಇದಕ್ಕೂ ಮೊದಲು ದತ್ತಾತ್ರೇಯರ ವಿಗ್ರಹ ಇಟ್ಟು ಪೂಜೆ ಸಲ್ಲಿಸಲಾಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!