April 29, 2024

MALNAD TV

HEART OF COFFEE CITY

ಮಠಾಧೀಶರು ಬೇಕಾಗಿದ್ದಾರೆ ಪ್ರಸಂಗ ನೆನಪಿಸಿದ ನಿರ್ಮಲಾನಂದನಾಥ ಶ್ರೀ

1 min read

 

 

ಶೃಂಗೇರಿ : ಮಠಾಧೀಶರು ಬೇಕಾಗಿದ್ದಾರೆ ಎಂಬ ಪ್ರಸಂಗವನ್ನು ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳು ಸ್ಮರಿಸಿದರು. 

 

ಪತ್ರಿಕಾ ಪ್ರಕಟಣೆ ಹೊರಡಿಸಿ ಆದಿಚುಂಚನಗಿರಿ ಮಠಕ್ಕೆ ಪೀಠಾಧಿಪತಿ ಆಯ್ಕೆ ಮಾಡಿದ ಪ್ರಸಂಗವನ್ನು ನಿರ್ಮಲಾನಂದನಾಥ ಶ್ರೀಗಳು ಇಂದು ಶೃಂಗೇರಿಯಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ಆಗಿದ್ದ ವೇಳೆ ಪತ್ರಿಕೆಯಲ್ಲಿ ಜಾಹೀರಾತು ನೋಡಿ ಆದಿಚುಂಚನಗಿರಿ ಮಠಕ್ಕೆ ಬಂದು ಪೀಠಾಧಿಪತಿಯಾದ ವಿಷಯ ಬಾಲಗಂಗಾಧರನಾಥ ಸ್ವಾಮೀಜಿ ಯವರೇ ಹೇಳಿದ್ದನ್ನ ನೆನಪಿಸಿಕೊಂಡ ನಿರ್ಮಲಾನಂದನಾಥ ಶ್ರೀಗಳು ವಿದ್ಯಾರ್ಥಿ ಆಗಿದ್ದ ವೇಳೆಯಲ್ಲೇ ಧ್ಯಾನ ಮಾಡುವಾಗ ಮರ ಬಿದ್ದು ಜೀವ ಹೋಗುವುದು ತಪ್ಪಿದ್ದನ್ನು ಬಾಲಗಂಗಾಧರನಾಥ ಶ್ರೀಗಳು ಸತ್ತು ಹೋಗಿದ್ದೆನೆ ಎಂದುಕೊಂಡೆ ಬದುಕಿದ್ದೇನೆ ಎಂಬ ಮಾತನ್ನ ಸ್ಮರಿಸಿದರು.

 

ಒಮ್ಮೆ ಶ್ರೀಗಳು ಬೈಬಲ್ ಓದುವ ವೇಳೆ ಜೀಸಸ್ ತನ್ನ 12 ಅನುಯಾಯಿಗಳಿಗೆ ಭೋದನೆ ಮುಗಿಸಿದ ನಂತರ ಜನಸೇವೆಗೆ ಕಳುಹಿಸುವ ವೇಳೆ ಕಾಡಿನಿಂದ ನಾಡಿಗೆ ಹೋಗುತ್ತಿದ್ದೀರಿ ಕಠಿಣವಿದೆ ಎದೆಗುಂದದೆ ಕಾರ್ಯನಿರ್ವಹಿಸಿ ಎಂದು ಹೇಳಿದ ವಿಷಯವನ್ನು ಪ್ರಸ್ತಾಪಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಗುರು ಎಂದರೆ ಧೃವ ನಕ್ಷತ್ರ ಇದ್ದಂತೆ ಆಗಸದಲ್ಲಿ ಬೇರೆ ಎಷ್ಟೇ ತಾರೆಗಳಿದ್ದರು ಧೃವತಾರೆ ಬದುಕಿಗೆ ಸಮಗ್ರ ಮಾರ್ಗದರ್ಶನ ನೀಡುತ್ತಾರೆ ಎಂದರು. ಜ್ಞಾನಕ್ಕೆ ವಿದ್ಯಾದಾನ ಅತಿಶ್ರೇಷ್ಠ ಬಾಲಗಂಗಾಧರನಾಥ ಶ್ರೀಗಳು ಕಟ್ಟಿದ ಶಿಕ್ಷಣ ಸಂಸ್ಥೆಗಳು ಇಂದು ಅವರನ್ನು ಶಾಶ್ವತವಾಗಿರಿಸಿದೆ ಎಂದು ಅವರು ತಿಳಿಸಿದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!