ಟೆರರಿಸ್ಟ್ ಗಳು ತೀರ್ಥಹಳ್ಳಿಯವರು ಎಂಬುದು ತಲೆ ತಗ್ಗಿಸುವ ವಿಷಯ : ಆರಗ ಜ್ಞಾನೇಂದ್ರ
1 min read
ಕುವೆಂಪುರಂತ ಮಹನೀಯರು ಹುಟ್ಟಿದ ಸುಸಂಸ್ಕೃತ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಭಯೋತ್ಪಾದಕರು ಇರುವುದು ತಲೆ ತಗ್ಗಿಸುವ ವಿಚಾರ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು
ಕಳೆದ ರಾತ್ರಿ ಎನ್ಐಎ ಬೆಂಗಳೂರು ರಾಮೇಶ್ವರ ಕೆಫೆ ಬ್ಲಾಸ್ಟ್ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದು ಇವರು ತೀರ್ಥಹಳ್ಳಿಯವರಾಗಿರುವುದು ಬೇಸರ ಹಾಗೂ ನೋವಿನ ಸಂಗತಿ ಎಂದು ಜ್ಞಾನೇಂದ್ರ ಹೇಳಿದರು
ಬೆಂಗಳೂರು ರಾಮೇಶ್ವರಂ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿ ಸಂಶಯದಲ್ಲಿ ಇಬ್ಬರು ಆರೋಪಿಗಳನ್ನು ಎನ್ಐಎ ಕಳೆದ ರಾತ್ರಿ ವಶಕ್ಕೆ ಪಡೆದಿದ್ದು ಇವರು ತೀರ್ಥಹಳ್ಳಿಯವರು ಆಗಿರುವುದು ತಲೆತಗ್ಗಿಸುವ ವಿಚಾರ ಎಂದು ಕ್ಷೇತ್ರದ ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಭಯೋತ್ಪಾದಕರು ಇರುವುದು ಬೇಸರದ ನೋವಿನ ಸಂಗತಿ ಎಂದಿರುವ ಆರಗ ಜ್ಞಾನೇಂದ್ರ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಗೆ ಸಹಾ ಸಾಮಿಪ್ಯ ಇರುವುದು ಗೊತ್ತಾಗಿದೆ. ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲಿದೆ. ಭಯೋತ್ಪಾದಕರಿಗೆ ಅಂತರ ರಾಷ್ಟ್ರೀಯ ಲಿಂಕ್ ಇರುವುದು ಗೊತ್ತಾಗಿದೆ. ಬೇರು ಸಹಿತ ಇದನ್ನು ಕಿತ್ತೊಗೆಯಲು ಕೇಂದ್ರ ಸರ್ಕಾರ ಬದ್ದವಾಗಿದೆ. ರಾಜ್ಯ ಪೊಲೀಸರು ಸಹಾ ಎನ್ಐಎ ಗೆ ಈ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g