ದೇಶದ ವೈವಿಧ್ಯತೆ ಪ್ರತ್ಯೇಕತೆಯ ಲಕ್ಷಣ ಅಲ್ಲ : ಸಿ.ಟಿ ರವಿ
1 min read
ಶೃಂಗೇರಿ : ನಮ್ಮ ದೇಶದ ವೈವಿದ್ಯತೆಯನ್ನು ಕೆಲವರು ಪ್ರತ್ಯೇಕತೆ ಎಂದು ಭಾವಿಸಿದ್ದು, ಭಾರತದ ವೈವಿದ್ಯತೆ ಪ್ರತ್ಯೇಕತೆಯ ಲಕ್ಷಣ ಅಲ್ಲ ರಾಷ್ಟ್ರಕವಿ ಕುವೆಂಪು ಇದನ್ನೇ ನಾಡಗೀತೆಯಲ್ಲಿ ಬರೆದಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ ಹೇಳಿದ್ದಾರೆ.
ಜಗತ್ತಿಗೆ ಸತ್ಯ ಎಂಬ ಒಂದೇ ಧರ್ಮ ಇದೆ. ಬೇರೆಲ್ಲವೂ ಮತಗಳು ಅಷ್ಟೇ ಅದರಲ್ಲೂ ಕೆಡಕು ಮಾಡುವುದು ಒಂದು ಧರ್ಮವೇ ಅಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ. ಶೃಂಗೇರಿಯಲ್ಲಿ ನಡೆಯುತ್ತಿರುವ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತ ದೇಶದಲ್ಲಿ ವೈವಿಧ್ಯತೆ ಇದೆ ಆದರೆ ಅದು ಪ್ರತ್ಯೇಕತೆಯ ಲಕ್ಷಣ ಅಲ್ಲ ಎನ್ನುವ ಮೂಲಕ ಹಿಂದು ರಾಷ್ಟ್ರ ಪರ-ವಿರೋಧ ಚರ್ಚೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇಡೀ ಜಗತ್ತಿಗೆ ಧರ್ಮ ಒಂದೇ ಆದರೆ ಮತಗಳು ಬೇರೆ ಬೇರೆ ಇವೆ. ಸತ್ಯದ ತಳಹದಿ ಸರ್ವರ ಒಳಿತು ಇರುವುದೇ ಧರ್ಮ ಎಂದ ರವಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗರ ಒಳಪಂಗಡಗಳನ್ನು ಒಗ್ಗೂಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g