ರಾಮೇಶ್ವರಂ ಕೆಫೆ ಸ್ಪೋಟದ ನಂಟಿದ್ದ ಶಂಕಿತ ಉಗ್ರ ಚಿಕ್ಕಮಗಳೂರಲ್ಲಿ ಬಂಧನ
1 min readಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಸಂಬಂಧ ಚಿಕ್ಕಮಗಳೂರಿನ ಓರ್ವನನ್ನು ಎನ್ಐಎ ಬಂಧಿಸಿರುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ದುಬೈ ನಗರದಲ್ಲಿ ವಾಸವಿದ್ದ ಮುಝಮಿಲ್ ಷರೀಫ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು ಕೆಫೆ ಸ್ಪೋಟದ ಪ್ರಮುಖ ಆರೋಪಿಗೆ ಲಾಜಿಸ್ಟಿಕ್ ಬೆಂಬಲ ಈತ ನೀಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು ರಾಮೇಶ್ವರಂ ಕೆಫೆಯ ಸ್ಪೋಟ ಸಂಬಂಧ ಉಗ್ರರ ಜಾಡು ಹಿಡಿದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತಷ್ಟು ಸಂಚುಕೋರರ ಬೆನ್ನು ಬಿದ್ದಿದೆ. ಇಂದು ಬಂಧಿಸಿರುವ ಮುಝಮ್ಮಿಲ್ ಷರೀಫ್ ಚಿಕ್ಕಮಗಳೂರು ಮೂಲದವನು ಎಂಬ ಸ್ಪೋಟಕ ಸುದ್ದಿ ತಿಳಿದುಬಂದಿದೆ. ಈತ ನಗರದ ದುಬೈ ನಗರದಲ್ಲಿ ವಾಸವಿದ್ದು ಬೆಂಗಳೂರಿಗೆ ಹೋಗಿ ಬರುತ್ತಿದ್ದ ಎನ್ನಲಾಗಿದ್ದು ಸ್ಪೋಟಕ್ಕೆ ಬೇಕಿದ್ದ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಇದರೊಂದಿಗೆ ಕಾಫಿನಾಡಿಗೂ ಉಗ್ರರ ನಂಟು ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕೆಫೆಯಲ್ಲಿ ಐಇಡಿ ಬಳಸಿ ಸ್ಪೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇಂದು ನಸುಕಿನ ಜಾವ ಚಿಕ್ಕಮಗಳೂರಿನ ಮುಝಮಿಲ್ ಮನೆಗೆ ದಾಳಿ ನಡೆಸಿ ಬಂಧಿಸಿರುವ ಎನ್ಐಎ ಅಧಿಕಾರಿಗಳು ಅವನು ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಅಲ್ಲಿದ್ದ ಕೆಲವು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಹಣವನ್ನು ಸಹಾ ಸೀಜ್ ಮಾಡಲಾಗಿದೆ. ಇದರ ಜೊತೆಗೆ ಸ್ಪೋಟದ ಹಿಂದಿನ ಬಹುದೊಡ್ಡ ಪಿತೂರಿಯನ್ನು ಸಹಾ ರಾಷ್ಟ್ರೀಯ ತನಿಖಾ ಸಂಸ್ಥೆ ಬಯಲಿಗೆಳೆಯಲು ಸರ್ವಪ್ರಯತ್ನ ನಡೆಸುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g