April 30, 2024

MALNAD TV

HEART OF COFFEE CITY

ನಾನು ರಸ್ತೆ ಗುಂಡಿ ಮುಚ್ಚಲ್ಲ : ಸಿ.ಟಿ ರವಿಗೆ ಎಚ್ ಡಿ ತಮ್ಮಯ್ಯ ಟಾಂಗ್

1 min read

 

 

ನಿನ್ನೆ ಸಖರಾಯಪಟ್ಟಣ ಚುನಾವಣಾ ರ್ಯಾಲಿಯಲ್ಲಿ ನಾನು ಮಾಡಿದ ರಸ್ತೆಯ ಗುಂಡಿ ಮುಚ್ಚಲಿ ಎಂಬ ಮಾಜಿ ಶಾಸಕ ಸಿ.ಟಿ ರವಿ ಹೇಳಿಕೆಗೆ ಹಾಲಿ ಶಾಸಕ ಎಚ್ ಡಿ ತಮ್ಮಯ್ಯ ಟಾಂಗ್ ಕೊಟ್ಟಿದ್ದಾರೆ. ನಾನು ಗುಂಡಿ ಮುಚ್ಚಿಸಲ್ಲ, ಬದಲಾಗಿ ಹೊಸ ರಸ್ತೆಗಳನ್ನೇ ಮಾಡಿಸುತ್ತೇನೆ ಎಂದಿರುವ ಅವರು ಹಗುರವಾಗಿ ಮಾತನಾಡುವುದು ಮತ್ಸದ್ದಿ ರಾಜಕಾರಣಿ ಲಕ್ಷಣ ಅಲ್ಲ ಎಂದಿದ್ದಾರೆ ತಮ್ಮಯ್ಯ. 

 

ನಾಲ್ಕನೇ ಬಾರಿಗೆ ಗೆದ್ದು ಉತ್ತಮ ಕೆಲಸ ಮಾಡಿಸಿದ್ದೆ ಎಂದಿರುವ ಮಾಜಿ ಶಾಸಕ ಸಿ.ಟಿ ರವಿ ಮೂರು ಬಾರಿ ಚಿಕ್ಕಮಗಳೂರು ವಿಧಾನಸಭೆಗೆ ಅಭಿವೃದ್ಧಿ ಮಾಡಿಲ್ಲ ಎಂದು ತಾವೇ ಒಪ್ಪಿಕೊಂಡಿದ್ದಾರೆ ಎಂದು ಶಾಸಕ ಎಚ್ ಡಿ ತಮ್ಮಯ್ಯ ತಿರುಗೇಟು ನೀಡಿದ್ದಾರೆ. ಲೋಕಸಭೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಸಖರಾಯಪಟ್ಟಣ ಬ್ಲಾಕ್ ನ ಹಲವೆಡೆ ಪ್ರಚಾರ ನಡೆಸಿದ ಅವರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರು ಈ ರೀತಿ ಹಗುರವಾಗಿ ಮಾತನಾಡುವುದು ಮತ್ಸದ್ದಿ ರಾಜಕಾರಣಿ ಲಕ್ಷಣ ಅಲ್ಲ ಎಂದಿರುವ ತಮ್ಮಯ್ಯ ನಾನು ತಂದಿರುವ ಅನುದಾನದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳ ಗುಂಡಿ ಮುಚ್ಚಿಸಲಿ ಎಂಬ ರವಿ ಮಾತಿಗೆ ಸಖತ್ ಟಾಂಗ್ ಕೊಟ್ಟಿರುವ ಅವರು ನಾನು ಗುಂಡಿ ಮುಚ್ಚಿಸಲ್ಲ ಬದಲಾಗಿ ಹೊಸ ರಸ್ತೆಗಳನ್ನೇ ಮಾಡಿಸುತ್ತಿದ್ದೇನೆ, ಮಂಜೂರಾತಿ ಕೊಡಿಸುವುದು ಮುಖ್ಯ ಅಲ್ಲ ಕೆಲಸ ಯಾರು ಮಾಡಿಸುತ್ತಿದ್ದಾರೆ ಎಂಬುದು ಮುಖ್ಯ ನಾವು ಮಾಡಿಸುತ್ತಿರುವ ಕಾಮಗಾರಿಗೆ ಹಿಂದಿನ ಸರ್ಕಾರ ಬಂದು ದುಡ್ಡು ಕೊಡಲ್ಲ ಎಂದು ಎಚ್ ಡಿ ತಮ್ಮಯ್ಯ ಹೇಳಿದ್ದಾರೆ. ದೇವಸ್ಥಾನ ಕೆಲಸಗಳಿಗೆ ಕೇಳಿದಕ್ಕಿಂತ ಹೆಚ್ಚು ಹಣ ಕೊಟ್ಟಿದ್ದೇವೆ ಎಂಬ ಮಾತಿಗೂ ತಿರುಗೇಟು ಕೊಟ್ಟ ತಮ್ಮಯ್ಯ ನಮ್ಮ ಸರ್ಕಾರ ಕೇಳುವುದಕ್ಕೂ ಮೊದಲೇ ದೇವಸ್ಥಾನಗಳ ಕಾಮಗಾರಿಗೆ ಹಣ ಕೊಟ್ಟಿದೆ ಎಂದಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!