ನಗರದಲ್ಲಿ ಘರ್ಜಿಸಿದ ಜೆಸಿಬಿ ಯಂತ್ರ, ಒತ್ತುವರಿ ಜಾಗ ತೆರವು
1 min read
ಚಿಕ್ಕಮಗಳೂರು-ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿನ ಒತ್ತುವರಿ ಜಾಗವನ್ನು ಅಧ್ಯಕ್ಷರ ಸಮ್ಮುಖದಲ್ಲಿ ತೆರವುಗೊಳಿಸುವ ಕಾರ್ಯವನ್ನು ಕಳೆದ 15 ದಿನಗಳಿಂದ ಮಾಡುತ್ತಿದ್ದು. ಗುರುವಾರ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಒತ್ತುವರಿ ತೆರವು ಕಾರ್ಯ ಪೊಲೀಸರ ಬಂದೋಬಸ್ತ್ನೊಂದಿಗೆ ನಡೆಯಿತು.
ನಗರದಲ್ಲಿ ನೀಲಿನಕಾಶೆಯನ್ನು ಧಿಕ್ಕರಿಸಿ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ನಿವಾಸಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಕಳೆದ 15 ದಿನಗಳಿಂದ ನಗರದ ವಿವಿಧ ವಾರ್ಡ್ಗಳಲ್ಲಿ ತೆರವು ಕಾರ್ಯ ನಡೆಸುತ್ತಿದ್ದು ಎಚ್ಚೆತ್ತುಕೊಳ್ಳದ ಹಿನ್ನಲೆ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ತೆರವು ಮಾಡಿಸುವ ಕಾರ್ಯಕ್ಕೆ ಮುಂದಾದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಕಳೆದ ಒಂದು ತಿಂಗಳಿಂದ ಮನೆ ಮುಂದಿನ ಒತ್ತುವರಿ ಜಾಗವನ್ನು ತೆರವುಗೊಳಿಸುವ ತಿಳುವಳಿಕೆ ಮೂಡಿಸಿದ್ದರು, ಕೆಲವೆಡೆ ನಿವಾಸಿಗಳು ಎಚ್ಚೆತ್ತುಕೊಂಡಿಲ್ಲ, ನಗರಸಭೆ, ಪ್ರಾಧಿಕಾರ ನೀಡಿದ ನಕಾಶೆಯನ್ನು ಮೀರಿ ಸರ್ಕಾರಿ ಜಾಗದ ರಸ್ತೆ, ಚರಂಡಿಯನ್ನು ಒತ್ತುವರಿ ಮಾಡಿ ತಂತಿ ಬೇಲಿ ನಿರ್ಮಿಸಿಕೊಂಡು, ಗಿಡಗಳನ್ನು ಬೆಳೆಸಿಕೊಂಡು ಪಾರ್ಕಿಂಗ್ ಶೆಡ್ ಮಾಡಿಕೊಳ್ಳಲಾಗಿದೆ ಇದರಿಂದಾಗಿ ರಸ್ತೆ ಕಿರಿದಾಗುವುದರಿಂದ ಸಂಚರಿಸುವ ವಾಹನಗಳಿಗೆ ಅಡಚಣೆಯಾಗುತ್ತಿದ್ದು ಸಾಕಷ್ಟು ಬಾರಿ ಸಾರ್ವಜನಿಕರಿಂದಲೇ ದೂರುಗಳು ಕೇಳಿಬಂದಿದ್ದವು ಆ ಹಿನ್ನೆಲೆ ಪ್ರತಿ ವಾರ್ಡ್ಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬುದ್ದಿವಂತ ಜೀವಿಗಳೇ ಹೆಚ್ಚಿರುವ ಹೌಸಿಂಗ್ ಬೋರ್ಡ್ನಲ್ಲಿಯೂ ಸರ್ಕಾರಿ ಜಾಗದ ಒತ್ತುವರಿಯಾಗಿರುವುದು ಬೇಸರ ತರಿಸಿದೆ. ಯಾವುದೇ ಪ್ರಭಾವಿ ಕೂಡ ಒತ್ತುವರಿ ಮಾಡಿದ್ದಲ್ಲಿ ತೆರವು ಕಾರ್ಯ ಮುಂದುವರಿಯಲಿದೆ ಇದನ್ನೇ ಎಚ್ಚರಿಕೆ ಎಂದು ಭಾವಿಸಿ ತೆರವು ಮಾಡಿಕೊಳ್ಳುವಂತೆ ಸೂಚಿಸಿದರು.
ಇನ್ನು ಪೌರಕಾರ್ಮಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ಸಲಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಟೆಂಡರ್ ಕರೆಯಲಾಗಿದೆ ಪ್ರಕ್ರಿಯೆ ಬಳಿಕ ಸಮಸ್ಯೆಗಳು ಬಗೆಹರಿಲಿದೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಸರ್ಕಾರಿ ರಸ್ತೆ, ಚರಂಡಿಗಳನ್ನು ಒತ್ತುವರಿ ಮಾಡಿರುವವರು ತೆರವು ಮಾಡುವಂತೆ ಸಾಕಷ್ಟು ಬಾರಿ ತಿಳುವಳಿಕೆ ನೀಡಿದ್ದರು ಕೆಲವು ಮಂದಿ ಎಚ್ಚೆತ್ತುಕೊಂಡಿಲ್ಲ ಆ ಹಿನ್ನಲೆ ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭೆ ತೆರವು ಮಾಡಿ ಅದಕ್ಕೆ ತಗುಲುವ ವೆಚ್ಚವನ್ನ ದಂಡದ ರೂಪದಲ್ಲಿ ವಸೂಲಿ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g