ಕಾಡಾನೆ ದಾಳಿಯಿಂದ ಕಂಗೆಟ್ಟ ರೈತರು, ತೋಟದಲ್ಲಿ ಡಿಜೆ ಫಿಕ್ಸ್ ಮಾಡಿದ ಅನ್ನದಾತ
1 min readಚಿಕ್ಕಮಗಳೂರು : ರೈತರಿಗೆ ಪ್ರಕೃತಿಯಿಂದ ಬೆಳೆ ಉಳಿಸಿಕೊಳ್ಳುವುದಕ್ಕಿಂತ ಕಾಡಾನೆ, ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಅಧಿಕಾರಿಗಳಿಗೆ ಪತ್ರ ಮೇಲೆ ಪತ್ರ ಬರೆದ ರೈತರೇ ಇದೀಗ ಆನೆ ಹಾವಳಿಗೆ ಬ್ರೇಕ್ ಹಾಕೋದಕ್ಕೆ ಹೊಸ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಆನೆ ಹಾವಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರದಲ್ಲಿ ರೈತರು ಆನೆ ಹಾವಳಿಯಿಂದ ಕಂಗೆಟ್ಟಿದ್ದಾರೆ. ಅದಕ್ಕೆ ರೈತರೇ ಈಗ ಹೊಲ-ಗದ್ದೆ-ತೋಟಗಳಲ್ಲಿ ಮೈಕ್ ಸೆಟ್, ಡಿಜೆ, ಸಿಸ್ಟಮ್ ಇಟ್ಟು ಆನೆ ಓಡಿಸೋದಕ್ಕೆ ಮುಂದಾಗ್ತಿದ್ದಾರೆ.
ಹೊಲ-ಗದ್ದೆ-ತೋಟಗಳಲ್ಲಿ ಹಗಲಿರುಳೆನ್ನದೆ ಆನೆ ಬಂತು ಓಡಿಸ್ರೋ….. ಈ ಕಡೆ ಬಂತು…. ಆ ಕಡೆ ಬಂತು…. ಜನ ಕೂಗೋದು, ಪಟಾಕಿ ಸಿಡಿಯುವ ಸೌಂಡಿನ ಮ್ಯೂಸಿಕ್ ಹಾಕಿ ಬಿಟ್ಟಿದ್ದಾರೆ. ಇದರಿಂದ ಹೊಲ-ಗದ್ದೆ-ತೋಟಗಳಲ್ಲಿ ಕಾಡಾನೆಗಳ ಹಾವಳಿ ತಪ್ಪುತ್ತೆ ಅನ್ನೋದು ರೈತರ ನಂಬಿಕೆ. ಪ್ರಸ್ತುತ ಆನೆ ಹಾವಳಿ ತಕ್ಕ ಮಟ್ಟಿಗೆ ಸುಧಾರಿಸಿದೆ. ಆದ್ರೆ, ಮುಂದೇನೋ ಗೊತ್ತಿಲ್ಲ. ಆದ್ರೆ, ಕೆಲ ತೋಟಗಳಲ್ಲಿ ಈಗಾಗಲೇ ಮರಗಳಲ್ಲಿ ಮೈಕ್ ಸೆಟ್ ಜೋತು ಬಿದ್ದಿವೆ. ಕಾಫಿನಾಡಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಅಬ್ಬರ ಜೋರಿತ್ತು. ಹಲವು ವರ್ಷಗಳಿಂದ ಇದೆ. ಈಗಲೂ ಇದೆ. ಹಳ್ಳಿಗಳಲ್ಲಿ ರೈತರಂತೆ ಠಿಕಾಣಿ ಹೂಡಿವೆ. ಆನೆಯಿಂದ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈಗ ಚಿಕ್ಕಮಗಳೂರಿನ ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆನೆ ಹಾವಳಿ ಮಿತಿ ಮೀರ್ತಿದೆ. ವಾರಕ್ಕೆರಡು ಬಾರಿ ಫ್ಯಾಮಿಲಿ ಸಮೇತ ಬಂದೋಗೋದು ಫಿಕ್ಸ್ ಆಗಿದೆ. ಹಾಗಾಗಿ, ಗುಡ್ಡಗಳ ಪಕ್ಕದಲ್ಲಿರೋ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಾಗದಂತೆ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಸುತ್ತಮುತ್ತಲಿನ ಹೊಲ-ಗದ್ದೆ-ತೋಟಗಳಲ್ಲಿ ಮೂವತ್ತಕ್ಕೂ ಹೆಚ್ಚು ಮೈಕ್ಗಳನ್ನ ಹಾಕಿದ್ದಾರೆ. ಕೆಲವೆಡೆ ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಅನ್ ಆಗುತ್ತೆ. ಮೈಕಿನಲ್ಲಿ ಜನ ಮಾತನಾಡುವ ಹಾಗೆ, ಪ್ರಾಣಿಗಳು ಕೂಗುವ ಹಾಗೆ, ಪಟಾಕಿ ಸಿಡಿಯುವಂತೆ ನಿರಂತರ ಸೌಂಡ್ ಬರುತ್ತಿರುತ್ತೆ. ಶಬ್ಧಕ್ಕೆ ಹದರುವ ಕಾಡಾನೆಗಳು ಜಮೀನಿನತ್ತ ಬರಲ್ಲ ಅನ್ನೋದು ರೈತರೇ ಕಂಡುಕೊಂಡ ಮಾಸ್ಟರ್ ಪ್ಲಾನ್.
ಒಟ್ಟಾರೆ, ಕಾಡಾನೆಗಳಿಂದ ನಲುಗಿ ಹೋಗಿರೋ ರೈತರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಈ ತಾತ್ಕಾಲಿಕ ಐಡಿಯಾಕೆ ಮೊರೆ ಹೋಗಿದ್ದಾರೆ. ಆದ್ರೆ, ಆನೆಗಳಿಗೂ ಬುದ್ಧಿ ಇರುತ್ತೆ. ಆನೆಗಳಿಗೆ ಈ ಮೈಕ್ ನಮ್ಮನ್ನ ಯಾಮಾರಿಸೋಕೆ ಹಾಕಿರೋದು ಎಂದು ಗೊತ್ತಾದರೆ ಮೊದ್ಲು ಕಿತ್ತಾಕೋದು ಮೈಕ್ಗಳನ್ನ. ಆಗ ಮತ್ತೆ ಆನೆ ಹಾವಳಿ ಹೆಚ್ಚಾಗೋದ್ರಲ್ಲಿ ನೋ ಡೌಟ್. ಹಾಗಾಗಿ, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಎರಡನ್ನೂ ಉಳಿಸೋದಕ್ಕೆ ಮುಂದಾಗಬೇಕೆಂಬುದು ಸ್ಥಳಿಯರ ಆಗ್ರಹವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g