ಅತಿವೃಷ್ಟಿ ಪರಿಹಾರಕ್ಕೆ ಆಗ್ರಹಿಸಿ ಚನ್ನಹಡ್ಲು ಗ್ರಾಮಸ್ಥರಿಂದ ಪ್ರತಿಭಟನೆ
1 min readಚಿಕ್ಕಮಗಳೂರು: 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕಳಸ ತಾಲ್ಲೂಕು ಚನ್ನಹಡ್ಲು ಗ್ರಾಮದಲ್ಲಿ 15 ಕುಟುಂಬಗಳು ನಿವೇಶನ ಕಳೆದುಕೊಂಡಿದ್ದು ನಿವೇಶನ ಮತ್ತು ಮನೆ ಬಾಡಿಗೆ ಹಣ ನೀಡುವಂತೆ ಆಗ್ರಹಿಸಿ ನಿರಾಶ್ರಿತರು ಮತ್ತು ವಿವಿಧ ಸಂಘಸಂಸ್ಥೆಗಳ ಮುಖಂಡರು ಕಳಸ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಿರಾಶ್ರಿತರಾದ ಸುಲೋಚನ ಮಾತನಾಡಿ, ಬಾರೀ ಮಳೆಯಿಂದ ಮನೆ ಕಳೆದುಕೊಂಡಿದ್ದೇವೆ. ಅಧಿಕಾರಿಗಳು ಬೇರೆ ನಿವೇಶನ ಕೊಡುವುದಾಗಿ ಹೇಳಿ ಇರುವ ಭೂಮಿ ಯನ್ನು ಕಿತ್ತುಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಮೂರು ವರ್ಷ ಕಳೆದರು ಬಾಡಿಗೆನೂ ಇಲ್ಲ ಮನೆಯೂ ಇಲ್ಲದೆ ದಿನದೂಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಕಳಸಕ್ಕೆ ಬಂದಿದ್ದ ಜಿಲ್ಲಾಧಿಕಾರಿಗಳು ಹಕ್ಕುಪತ್ರ ನೀಡುತ್ತೇವೆ ಎಂದು ಹೇಳಿ ನಮ್ಮನೆಲ್ಲ ಕರೆಸಿ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
ನಿರಾಶ್ರಿತ ಜಗದೀಶ್ ಮಾತನಾಡಿ, ಕಾಣದ ಕೈಗಳು ನಮಗೆ ಹಕ್ಕುಪತ್ರವನ್ನು ನೀಡಲು ಬಿಡು ತ್ತಿಲ್ಲ, ಇಲ್ಲಿ ಸರ್ಕಾರಿ ಅಧಿಕಾರಿಗಳು ಖಾಸಗಿಯವರ ರಾಯಭಾರಿ ಎಂಬಂತಾಗಿದೆ. ಜಿಲ್ಲಾಧಿ ಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ನಮ್ಮಗೆ ಹಕ್ಕುಪತ್ರವನ್ನು ಕೊಡಲು ತಂದಿದ್ದರು. ಅದು ತಿದ್ದಪಡಿ ಆಗಬೇಕು ಒಂದು ವಾರದಲ್ಲಿ ಸರಿ ಪಡಿಸಿಕೊಡುತ್ತೇವೆ ಎಂದು ಹೇಳಿದ ಮೇಲೆ ಇಷ್ಟರವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ನಮಗೆ ಹಕ್ಕು ಪತ್ರ ಮತ್ತು ಬಾಡಿಗೆ ಹಣವನ್ನು ಕೊಡುವವರೆಗೆ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.
ಇಡಕಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಭಂಡಾರಿ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಒಂದು ವಾರದ ಒಳಗೆ ನಿವೇಶನ ಕೊಡುವ ಭರವಸೆ ನೀಡಿದ್ದರು. ಹತ್ತು ದಿನ ಕಳೆದರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನಾವು ನಿರಾಶ್ರಿತರ ಜೊತೆಗೂಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿ ದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರಾಶ್ರಿತರಾದ ನಾರಾಯಣ ಪೂಜಾರಿ, ಅವಿನಾಶ್, ದೂಜ, ನೀಲಯ್ಯ, ಸುಲೋಚನ, ಸುನೀತಾ, ಸುಧಾ, ರೇಣುಕ ಇದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g