ಮಾರ್ಚ್ 28 ಕ್ಕೆ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಮತ್ತು ಸರಳ ಸಾಮೂಹಿಕ ವಿವಾಹ
1 min readಚಿಕ್ಕಮಗಳೂರು : ಕುಮಾರಿಗಿರಿ ಸುಬ್ರಹ್ಮಣ್ಯ ಸ್ವಾಮಿ ಪಂಗುನಿ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೇ ಮಾರ್ಚ್ 26 ರಿಂದ ಮೂರು ದಿನಗಳ ಕಾಲ ನಡೆಯಲಿದೆ .
ಮೊದಲ ದಿನ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ಅಲಂಕಾರ, ಅಂದು ಬೆಳ್ಳಿಗೆ ನಡೆಯಲಿದೆ. ಧ್ವಜಾರೋಹಣ ಹಾಗೂ ಕಂಕಣಧಾರಣೆ ನಡೆಯಲಿದೆ. ಎರಡನೇ ದಿನ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಹಲವು ಗ್ರಾಮಗಳಲ್ಲಿ ನಡೆಯಲಿದೆ. ಕೊನೆಯ ದಿನ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ವಳ್ಳಿ ದೇವಾನೆರವರ ಕಲ್ಯಾಣೋತ್ಸವ ಮತ್ತು ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಅಂದು ಮಧ್ಯಾಹ್ನ ಅನ್ನ ಪ್ರಸಾದ ಸಹಾ ಇರಲಿದೆ. ಈಗಾಗಲೇ 7 ಜೋಡಿಗಳು ಸರಳ ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಸಿದ್ದು, ವಧು ವರರಿಗೆ ವಸ್ತ್ರ, ಬಾಸಿಂಗ ಸೇರಿಂದಂತೆ ಹೊಸ ಕುಟುಂಬ ಸ್ಥಾಪಿಸಲು ಬೇಕಾಗುವ ಎಲ್ಲಾ ಪರಿಕರಗಳನ್ನು ನೀಡಲಾಗುವುದು ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಈ ವೇಳೆ ಧರ್ಮದರ್ಶಿ ಮಂಡಳಿಯ ಉಪಾಧ್ಯಕ್ಷರುಗಳಾದ ಎ. ಮಹಾಲಿಂಗಂ, ವಿ. ಗುಣ ಶೇಖರ್, ಸಹ ಕಾರ್ಯದರ್ಶಿ ಎಲ್ ಕೇಶವ, ಖಜಾಂಚಿ ಕೆ. ಕೃಷ್ಣರಾಜ್, ನಿರ್ದೇಶಕರುಗಳಾದ ಜಿ. ಶಂಕರ್, ಎನ್ ಶಕ್ತಿವೇಲ್, ಜಿ. ರಘು, ಗೋಪಾಲ್, ಸಿ. ವೆಂಕಟೇಶ್ ಮುಂತಾದವರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g