May 2, 2024

MALNAD TV

HEART OF COFFEE CITY

ಎಲ್ಲೆಡೆ ಶಿವರಾತ್ರಿ ಸಂಭ್ರಮಾ ಗಣ್ಯಾತಿಗಣ್ಯರಿಂದ ಪರಶಿವನ ದರ್ಶನ

1 min read

ಚಿಕ್ಕಮಗಳೂರು : ಪ್ರಳಯ ರುದ್ರನಾದ ಶಿವನಿಗೆ ಜಗತ್ತಿನ ಪುರಾತನ ನಾಗರೀಕತೆಯಿಂದಲೂ ವಿಶೇಷ ಸ್ಥಾನವಿದೆ. ಪ್ರಕೃತಿಯ ಅಣು ಅಣುವಿನಲ್ಲೂ ಶಿವನ ಸ್ವರೂಪವಿದೆ. ಅಂತಹ ಶಿವನಿಗೆ ವರ್ಷಕ್ಕೊಮ್ಮೆ ಆತನ ಭಕ್ತರು ಜಾತಿ, ಧರ್ಮಗಳನ್ನು ಮೀರಿ ತಮ್ಮ ಮತ ಧರ್ಮಕ್ಕೆ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸುವುದು ರೂಡಿಯಲ್ಲಿದೆ. ತಿಂಗಳಲ್ಲಿ ಒಮ್ಮೆ ಮಾಸ ಶಿವರಾತ್ರಿ ಬಂದರೆ ವರ್ಷಕ್ಕೆ ಒಮ್ಮೆ ಶಿವರಾತ್ರಿ ಆಚರಣೆ ಜನಜನಿತ.

ಮಹಾ ಶಿವರಾತ್ರಿಯ ದಿನವಾದ ಇಂದು ನಗರದ ಶಿವ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ವೇದ ಮಂತ್ರಘೋಷ, ಮಂಗಳ ವಾದ್ಯ, ಮಹಾ ಮಂಗಳಾರತಿಗಳೊಂದಿಗೆ ಶಿವನಿಗೆ ವಿಶೇಷ ಪೂಜೆ ನಡೆಯಿತು. ನಗರದ ಬೋಳ ರಾಮೇಶ್ವರದಲ್ಲಿ ಶಿವನಿಗೆ ಬಿಲ್ವ ಪತ್ರೆಯಿಂದ ವಿಶೇಷ ಪೂಜೆ ನೆರವೇರಿತು. ಅಲಂಕಾರ ಪ್ರಿಯನಲ್ಲದ ಶಿವ ಭಕ್ತರು ಭಕ್ತಿಯಿಂದ ಏನೆ ನೀಡಿದರು ಸ್ವೀಕರಿಸಿ ಹರಸುವ ಶಿವನಿಗೆ ನಗರದೆಲ್ಲೆಡೆ ವಿಶೇಷ ಪೂಜೆ ನಡೆಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!