ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಸಿವಂತೆ ಅಗ್ರಹಿಸಿ ಮಾರ್ಚ್ 22 ರಂದು ವಿಧಾನ ಸೌಧ ಚಲೋ
1 min readಚಿಕ್ಕಮಗಳೂರು : ಇದೇ ಮಾರ್ಚ್ 22 ರಂದು ನಡೆಯಲಿರುವ ವಿದಾನಸೌಧ ಚಲೋ ಕಾರ್ಯಕ್ರಮಕ್ಕೆ ದೆಹಲಿ ರೈತ ಸಂಯುಕ್ತ ಹೋರಾಟದ ನಾಯಕ ರಾಕೇಶ್ ಟಿಕಾಯತ್ ಆಗಮಿಸಲಿದ್ದಾರೆ. ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಂ.ಎಸ್.ಪಿ ಯಿಂದ ರೈತರಿಗೆ ಲಾಭ ಎಲ್ಲಿ ಆಗಿದೆ ತೋರಿಸಿ. ಮತ್ತು ಕೊಡಿಸಿ ಎಂದು ಸವಾಲು ಹಾಕಿದರಲ್ಲದೇ 2019-20ನೇ ಸಾಲಿನಲ್ಲಿ 20,000 ಕೋಟಿ ರೈತರಿಗೆ ನಷ್ಟವಾಗಿದೆ ಎಂದು ಹೇಳಿದರು. ಮಾರ್ಚ್ 22 ರ ಬೆಂಗಳೂರು ಕಾರ್ಯಕ್ರಮದಲ್ಲಿ 50,000ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದು ಚಿಕ್ಕಮಗಳೂರಿನಿಂದ 1000 ಅನ್ನದಾತರು ಆಗಮಿಸಲಿದ್ದಾರೆ ಎಂದು ಹೇಳಿದ ಕಾರ್ಯಧ್ಯಕ್ಷ ವೀರಸಂಗಯ್ಯ ಹೇಳಿದರು, ಕೂಡಲೇ ಕೃಷಿ ಸಂಬಂಧಿತ ಎ.ಪಿ.ಎಂ.ಸಿ. ಯ ಮೂರು ಕಾನೂನುಗಳನ್ನು ರದ್ದುಗೂಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಹಾಗೂ ಜಿಲ್ಲೆಯ ಹಲವಾರು ರೈತ ಮುಂಖಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು 22ರ ಕಾರ್ಯಕ್ರಮಕ್ಕೆ ಸಂಘಟನೆ ಯೋಜನೆ ರೂಪಿಸಲು ಆರ್.ಎಂ.ಸಿ ಯಲ್ಲಿ ಸಭೆ ಸಹಾ ನಡೆಸಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g