May 10, 2024

MALNAD TV

HEART OF COFFEE CITY

ಕಾಫಿನಾಡಲ್ಲಿ ಮಳೆತಂದ ಅವಾಂತರ

1 min read

ಚಿಕ್ಕಮಗಳೂರು  : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ  ಮುಂದುವರೆದಿದೆ. ಕಳೆದ ಒಂದು ವಾರ ದಿಂದ  ಅಬ್ಬರಿಸಿದ್ದ ವರುಣ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಮಾಡಿದೆ.

ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಸುರಿದ ಮಳೆಗೆ ದನದ ಕೊಟ್ಟಿಗೆ ಕುಸಿದು ರೈತ ಬಸವೇಗೌಡ ಮೃತ ಪಟ್ಟಿದ್ದಾರೆ. ಅಲ್ಲದೆ ಮಣ್ಣಿನಡಿ ಸಿಲುಕಿ ಎರಡು ಹಸುಗಳು ಪ್ರಾಣ ಬಿಟ್ಟಿವೆ. ಜೊತೆಗೆ ಕೊಟ್ಟಿಗೆಯಲ್ಲಿದ್ದ ಮೊಮ್ಮಗ ಪಾರಾಗಿದ್ದು. ಹಸುಗಳನ್ನು ಮೇಯಿಸಲು ಕರೆದೊಯ್ಯಲು ಕೊಟ್ಟಿಗೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದ್ದು. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆಗೆ ಹರಸಾಹಸ ಮಾಡಿದರು ಮಣ್ಣಿನಲ್ಲಿ ಸಿಲಿಕಿದ್ದ ರೈತ ಹಾಗೂ ಹಸುಗಳು ಮೃತಪಟ್ಟಿವೆ.

ಕಳೆದ ಎರಡು ಮೂರು ದಿನಗಳಿಂದ ಮಳೆ ಬಿಟ್ಟು ಬಿಡದೆ ಸುರಿದ ಪರಿಣಾಮ ಚರ‍್ಮಾಡಿ ಘಾಟಿಯ ರಸ್ತೆಯ ಪಕ್ಕದಲ್ಲಿನ ಮಣ್ಣು ಕುಸಿತ ಉಂಟಾಗಿ ವಾಹನ ಸವಾರರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಜೋರಾದ ಹಿನ್ನೆಲೆ ಶಿರಾಡಿ ಘಾಟ್ ಬಂದ್ ಮಾಡಲಾಗಿದ್ದು. ಮಂಗಳೂರು ಭಾಗ ಸಂರ‍್ಕಕ್ಕೆ ಚರ‍್ಮಾಡಿ ಘಾಟ್ ಮೂಲಕ ವಾಹನ  ಸಂಚಾರ ಮಾಡಲಾಗುತ್ತಿದೆ.  ಮಲೆನಾಡು ಭಾಗದಲ್ಲಿ ಮಳೆ ಒಂದು ಕ್ಷಣವೂ ಬಿಡುವು ನೀಡದೇ ಸುರಿಯುತ್ತಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್. ಆರ್.ಪುರ, ಚಿಕ್ಕಮಗಳೂರು, ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಅಪಾಯಮಟ್ಟ ಮೀರಿ ಜಿಲ್ಲೆಯ ತುಂಗ-ಭದ್ರಾ, ಹೇಮಾವತಿ ನದಿಗಳು ಹರಿಯುತ್ತಿರುವೆ. ಇನ್ನು ಜಿಲ್ಲೆಯ ಕಿಗ್ಗಾ, ಕೆರೆಕಟ್ಟೆ, ಕುದುರೆಮುಖ, ಕಳಸ ಭಾಗದಲ್ಲಿ ಹೆಚ್ಚು  ಮಳೆಯಾಗಿದ್ದು ಹಳ್ಳಕೊಳ್ಳಗಳು ಉಕ್ಕಿಹರಿಯುತ್ತಿರುವೆ. ಕೊಪ್ಪ ಪಟ್ಟಣದಲ್ಲಿ ಮುಸ್ರೆಹಳ್ಳ ದ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಟಿಸಿಎಸ್ ಸಾರಿಗೆ ಕಚೇರಿ ಮುಂಭಾಗ ರಸ್ತೆ ಜಲಾವೃತವಾಗಿದೆ. ಅತ್ತ ಮಳೆಯ ಅಬ್ಬರಕ್ಕೆ ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಐದು ಅಡಿ ನೀರು ಹರಿಯುತ್ತಿದ್ದು. ಕಳಸ – ಹೊರನಾಡು ಸಂರ‍್ಕ ಬಂದ್ ಮಾಡಲಾಗಿದ್ದು. ಭದ್ರಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇನ್ನು ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ. ವಾರದ ಹಿಂದೆ ನಾಟಿ ಮಾಡಿದ್ದ ಭತ್ತದ ಗದ್ದೆಗಳು ನೀರು ಪಾಲಾಗಿ. ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!