ಮಲೆನಾಡಲ್ಲಿ ಆಯ್ತು ಈಗ ಬಯಲುಸೀಮೆ ಸರದಿ, ಗಜಪಡೆಗೆ ಕಂಗಾಲಾದ ಹಳ್ಳಿಗರು
1 min read
ಚಿಕ್ಕಮಗಳೂರು.: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ತಕ್ಕಮಟ್ಟಿಗೆ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸುತ್ತಮುತ್ತು ಕಾಡಾನೆಗಳ ಹಿಂಡು ಬೀಡು ಬಿಟ್ಟಿರೋದು ಸ್ಥಳಿಯರು ಕಂಗಾಲಾಗಿದ್ದಾರೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ, ಭೈರಾಪುರ, ನಂದಿಬಂಟ್ಲು, ಮಲ್ಲಿಗೇನಹಳ್ಳಿ ಸೇರಿದಂತೆ ಸುತ್ತಮುತ್ತ ಹಿಂಡು-ಹಿಂಡು ಕಾಡಾನೆ ಓಡಾಡುತ್ತಿದು ಜನ ಭಯಭೀತರಾಗಿದ್ದಾರೆ. ಹಿಂಡು-ಹಿಂಡು ಕಾಡಾನೆಗಳು ಓಡಾಡ್ತಿರುವುದರಿಂದ ಜನ ಹೊಲ-ಗದ್ದೆ-ತೋಟಗಳಿಗೆ ಹೋಗೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಈಗ ಅಡಿಕೆ ಕೊಯ್ಲಿನ ಸಮಯ. ಬೆಳೆಗಾರರು, ಕೂಲಿ ಕಾರ್ಮಿಕರು ಕೂಡ ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಿಂಡು-ಹಿಂಡು ಕಾಡಾನೆಗಳು ಕುಟುಂಬ ಸಮೇತ ಬಂದು ಇಲ್ಲಿ ಓಡಿಸಿದರೆ ಅಲ್ಲಿಗೆ ಅಲ್ಲಿ ಓಡಿಸಿದರೆ ಇಲ್ಲಿಗೆ ಬಂದು ಬೀಡು ಬೀಡ್ತಿದ್ದು ಜನ ಆನೆ ಹಾವಳಿಗೆ ಹೈರಾಣಾಗಿದ್ದಾರೆ.
ಸಂಜೆ ನಾಲ್ಕು-ಐದು ಗಂಟೆಯಾಗುತ್ತಿದ್ದಂತೆ ಹೊಲ-ಗದ್ದೆ-ತೋಟಗಳಿಗೆ ಬರುತ್ತಿರುವ ಕಾಡಾನೆಗಳು ಜಮೀನುಗಳ ತುಂಬಾ ರಾಜಾರೋಷವಾಗಿ ಓಡಾಡುತ್ತಿವೆ. ಕಳೆದ ನಾಲ್ಕೈದು ದಿನದಿಂದ ಸುಮಾರು ಎಂಟು ಕಾಡಾನೆಗಳು ಈ ಹಳ್ಳಿಯಿಂದ ಆ ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಓಡಾಡುತ್ತಿವೆ. ಅರಣ್ಯಕ್ಕೆ ಸಮೀಪದ ಉಡೇವ ಗ್ರಾಮದಲ್ಲಿ ಬೀಡುಬಿಟ್ಟಿವೆ. ಆನೆ ಕಂಡಾಗ ಸ್ಥಳಿಯರು ಪಟಾಕಿ ಸಿಡಿಸುತ್ತಾರೆ. ಆಗ ಬೇರೆ ಕಡೆ ಅಥವ ಕಾಡಿನಲ್ಲಿ ಮರೆಯಾಗುವ ಆನೆಗಳು ಮರುದಿನ ಮತ್ತದೇ ಜಾಗಕ್ಕೆ ಬಂದು ನಿಲುತ್ತಿದ್ದಾವೆ. ಸಂಜೆಯಾಗುತ್ತಿದ್ದಂತೆ ಜಮೀನಿನಲ್ಲೇ ಹಿಂಡು-ಹಿಂಡಾಗಿ ಬೀಡುತ್ತಿವೆ. ಇದರಿಂದ ಏಳೆಂಟು ಹಳ್ಳಿಯ ಜನ ಕಳೆದೊಂದು ವಾರದಿಂದ ಆನೆ ಹಾವಳಿಗೆ ಹೈರಾಣಾಗಿದ್ದಾರೆ. ಅರಣ್ಯದ ಅಂಚಿನ ಗ್ರಾಮಗಳಾಗಿರೋದ್ರಿಂದ ಆನೆ ಹಾವಳಿ ಮಿತಿ ಮೀರುತ್ತಿದೆ. ಹಾಗಾಗಿ, ಅರಣ್ಯ ಇಲಾಖೆ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g