May 15, 2024

MALNAD TV

HEART OF COFFEE CITY

ಬತ್ತಿಹೋಗಿದ್ದ ಕೊಳವೆ ಬಾವಿಯಲ್ಲಿ ನೀರು ಪ್ರತ್ಯಕ್ಷ

1 min read
water-was-visible-in-the-dry-well

ಚಿಕ್ಕಮಗಳೂರು : ಮಲೆನಾಡು ಸೀಮೆ ಹಾಗೂ ಬಯಲು ಸೀಮೆ ಎಂದು ನೋಡದೆ ಕಳೆದ ಮೂರು ನಾಲ್ಕು ವರ್ಷಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಂತರ್ಜಲ ಹೆಚ್ಚಿದ್ದು, ಇದು ವಿಸ್ಮಯಗಳಿಗೆ ಕಾರಣವಾಗಿದೆ. ಸತತ ಬರಗಾಲದಿಂದಾಗಿ ಒಣಗಿದ್ದ ಕೊಳವೆ ಬಾವಿಯ ಪಕ್ಕದಲ್ಲಿ ಹೊಸ ಬೋರ್ ಕೊರೆಸುವಾಗ ಹಳೇ ಬೋರ್‍ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿರುವ ಆಶ್ಚರ್ಯಕರ ಘಟನೆ ಚಿಕ್ಕಮಗಳೂರಿ ಜಿಲ್ಲೆ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ.

ಬೋರ್‍ನಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮುತ್ತಿರೋದನ್ನ ಕಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿಕ್ಕದೇವನೂರು ಗ್ರಾಮದ ಶೇಖರಪ್ಪ ಎಂಬುವವರ ಜಮೀನಿನಲ್ಲಿದ್ದ ಹಳೆಯ 150 ಅಡಿ ಆಳದ ಕೊಳವೆ ಬಾವಿಯು ಬಹಳ ವರ್ಷಗಳಿಂದ ಬತ್ತಿ ಹೋಗಿತ್ತು. ಈ ವರ್ಷ ಸಮೃದ್ಧ ಮಳೆಯಾದ ಹಿನ್ನೆಲೆ ತೆಂಗಿನ ತೋಟ ಉಳಿಸಿಕೊಳ್ಳುವ ಸಲುವಾಗಿ ಹಳೆಯ ಕೊಳವೆ ಬಾವಿ ಪಕ್ಕ ಹೊಸ ಬೋರ್ ಕೊರೆಸಲು ಮುಂದಾದಾಗ ಕೇವಲ 50 ಅಡಿಗೆ ನೀರು ಕಾಣಿಸಿಕೊಂಡಿದೆ. ಹೊಸ ಬೋರ್ ಪಕ್ಕದಲ್ಲಿದ್ದ ಹಳೆಯ ಕೊಳವೆ ಬಾವಿಯಲ್ಲಿ ನೀರು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು ನೋಡುಗರಲ್ಲಿ ಆಶ್ಚರ್ಯ ಮೂಡಿದೆ. ಬತ್ತಿದ್ದ ಬೋರ್ ನಲ್ಲಿ ಇದ್ದಕ್ಕಿದ್ದಂತೆ ನೀರು ಬೋರ್‍ವೆಲ್ ಲಾರಿಗಿಂತ ಎತ್ತರಕ್ಕೆ ಚಿಮ್ಮುತ್ತಿದ್ದನ್ನ ಕಂಡು ಜಮೀನು ಮಾಲೀಕ ಶೇಖರಪ್ಪ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಬಂದು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನೀರಿನ ವೇಗ ಜಾಸ್ತಿ ಆದ ಕಾರಣ ಹಳೆಯ ಬೋರ್‍ವೆಲ್ಲಿನ ಕೇಸಿಂಗ್ ಪೈಪ್‍ಗಳನ್ನ ಬಂದ್ ಮಾಡಿ ನಂತರ ಹೊಸ ಬೋರ್ ಕೊರೆದಿದ್ದಾರೆ.

water-was-visible-in-the-dry-well

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!