ಯಾವ ಪಕ್ಷಕ್ಕೆ ಮತ ನೀಡಬೇಕೆಂದು ಯಾವುದೇ ಮುಸ್ಲಿಂ ಸಭೆ ನಡೆದಿಲ್ಲ ಸ್ಪಷ್ಟನೆ
1 min readಚಿಕ್ಕಮಗಳೂರು : ಯಾವ ಪಕ್ಷಕ್ಕೆ ಮತ ನೀಡಬೇಕೆಂದು ಮುಸ್ಲಿಂ ಸಮುದಾಯದಲ್ಲಿ ಯಾವುದೇ ಸಭೆ ನಡೆದಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದು, ಹೈ ಕಮಾಂಡ್ ಯಾವ ಅಭ್ಯರ್ಥಿ ಆಯ್ಕೆ ಮಾಡುತ್ತೋ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಯಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಕೆಲವರು ಮುಸ್ಲಿಂ ಅಸೋಷಿಯೇಷನ್ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೀಡಿರುವ ಮಾಹಿತಿ ಸುಳ್ಳು ಮಾಹಿತಿಯಾಗಿದೆ. ಮುಸ್ಲಿಂ ಸಮಾಜದ ಧಾರ್ಮಿಕ ಸಂಸ್ಥೆಗಳ ಮುಖಂಡರೊಂದಿಗಾಗಲಿ, ಧರ್ಮಗುರುಗಳೊಂದಿಗಾಗಲಿ, ನಗರಸಭಾ ಸದಸ್ಯರೊಂದಿಗಾಗಲಿ ಚರ್ಚಿಸದೆ ಏಕಾಏಕಿ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರೇನು ಮುಸ್ಲಿಂ ಸಮಾಜವನ್ನು ಗುತ್ತಿಗೆ ತೆಗೆದುಕೊಂಡಿರುವರೇ ಎಂದು ಪ್ರಶ್ನಿಸಿದರಲ್ಲದೆ, ಅವರು ಮುಸ್ಲಿಂ ಸಮಾಜದ ಜಾಮೀಯ ಮಸೀದಿ, ಸೇರಿದಂತೆ ಯಾವುದೇ ಸಂಸ್ಥೆಗಳಲ್ಲಿ ಗುರುತರ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಹೈಕಮಾಂಡ್ ನೀಡುವ ತೀರ್ಮಾನಕ್ಕೆ ಬದ್ದರಾಗಿದ್ದು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಮತದಾನ ಅವರವರ ಹಕ್ಕಾಗಿದ್ದು, ಅವರು ಯಾರಿಗೆ ಬೇಕಾದರೂ ಮತ ಚಲಾಯಿಸಬಹುದು. ಮದರಸದಲ್ಲಾಗಲಿ ಅಥವಾ ಮಸೀದಿಗಳಲ್ಲಾಗಲಿ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಂಡಿಲ್ಲ ಸಮುದಾಯದ ಜನರು ಗೊಂದಲಕ್ಕೆ ಒಳಗಾಗಬಾರದೆಂದು ಸ್ಪಷ್ಟನೆ ನೀಡಿದರು.
ಜಾಮೀಯ ಮಸೀದಿ ಅಧ್ಯಕ್ಷರ ಸ್ಪಷ್ಟನೆ
ಇದೇ ವೇಳೆ ಬಿ.ಟಿ.ಎಂ.ಇ. ಜಾಮೀಯ ಮಸೀದಿ ಅಧ್ಯಕ್ಷ ಜಮೀರ್ ಅಹಮ್ಮದ್ ಸ್ಪಷ್ಟನೆ ನೀಡುತ್ತ, ಇಡಿ ಜಿಲ್ಲೆಗೆ ಜಾಮೀಯ ಮಸೀದಿ ದೊಡ್ಡ ಮಸೀದಿಯಾಗಿದ್ದು ಸುಳ್ಳು ಸುದ್ದಿ ನೀಡಿರುವುದನ್ನು ಖಂಡಿಸುತ್ತೇವೆ. ನಮ್ಮ ದೇಶ ಪ್ರಜಾಪ್ರಭುತ್ವ ದೇಶವಾಗಿದ್ದು, ಮತದಾನ ನಮ್ಮ ಹಕ್ಕಾಗಿದೆ, ಯಾರಿಗೆ ಬೇಕಾದರೂ ಮತ ಚಲಾಯಿಸಬಹುದು. ಮುಸ್ಲಿಂ ಅಸೋಷಿಯೇಷನ್ ನಮಗೆ ಕಂಡು ಬಂದಿಲ್ಲ. ಅಭ್ಯರ್ಥಿ ಘೋಷಣೆಯಾದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾರಿಗೂ ಬಲವಂತವಿಲ್ಲ. ವಿದೇಶದಿಂದ ಬರುತ್ತಿದ್ದವರನ್ನು ನಿಲ್ಲಿಸಿ ಚುನಾವಣೆ ಸಂದರ್ಭದಲ್ಲಿ ಬಂದು ಮತ ಚಲಾಯಿಸುವಂತೆ ತಿಳಿಸಿರುತ್ತೇವೆ. ನಾಳೆ ದಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ತಿಳಿಯುವುದಿಲ್ಲ. ಆದ್ದರಿಂದ ಒಂದು ಪಕ್ಷವಾಗಿ ನಾವು ನಿಲ್ಲುವುದಿಲ್ಲ, ಯಾರಿಗೆ ಬೇಕಾದರು ಮತ ಚಲಾಯಿಸಬಹುದು ಆದರೆ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತೇವೆ ಅಷ್ಟೇ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g