ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿ ನಾನಿಲ್ಲ : ಸಿ.ಟಿ. ರವಿ
1 min readರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ. ಹಾಗಾಗಿ, ರೇಸ್ ಪ್ರಶ್ನೆ ಇಲ್ಲ. ಕಾಂಪಿಟೇಶನ್ ಇದ್ದಾಗ ರೇಸ್ನಲ್ಲಿ ಇರಬೇಕಾಗುತ್ತೆ. ಹಾಗಾಂತ, ನಾನು ರೇಸ್ನಲ್ಲಿ ಇದ್ದೇನೆ ಎಂದು ಭಾವಿಸಬೇಡಿ. ನಾನು ರೇಸ್ನಲ್ಲಿ ಇಲ್ಲ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ.ರವಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಿ.ಟಿ.ರವಿ ದೆಹಲಿ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಸಿ.ಟಿ.ರವಿ ದಿಢೀರನೆ ಚಿಕ್ಕಮಗಳೂರು ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ, ಮಾತನಾಡಿದ ಅವರು, ನಮ್ಮ ಸಹಜ ಚಟುವಟಿಕೆಗಳನ್ನು ಮಾಧ್ಯಮಗಳು ಕುತೂಹಲದ ರೀತಿ ತೋರಿಸುತ್ತೀರಾ, ನನಗದು ಇಷ್ಟವಿಲ್ಲ ಎಂದರು. ರಾಜ್ಯಾಧ್ಯಕ್ಷ ಸ್ಥಾನ ಒಂದು ಜವಾಬ್ದಾರಿ ಅಷ್ಟೆ, ಅದನ್ನ ಯಾರೂ ಕೇಳಿ ಪಡೆಯಬಾರದು. ಯಾವಾಗ, ಯಾರು ಸೂಕ್ತ ಅನ್ನೋದನ್ನ ಪಕ್ಷದ ವರಿಷ್ಠರು ತೀರ್ಮಾನಿಸ್ತಾರೆ. ನಮ್ಮ ಪಕ್ಷದಲ್ಲಿ ಯಾವುದೂ ಶಾಶ್ವತವಲ್ಲ, ಯಾವಾಗ-ಯಾರೂ ಸೂಕ್ತ ಅನ್ನೋದನ್ನ ಪಕ್ಷ ನಿರ್ಧರಿಸುತ್ತೆ ಎಂದಿದ್ದಾರೆ. ನನ್ನ ದೆಹಲಿ ಜವಾಬ್ದಾರಿ ಮುಗಿದಿದೆ, ಮೀಟಿಂಗ್ ಇದ್ದಾಗಷ್ಟೆ ದೆಹಲಿಯಲ್ಲಿ ಇರುತ್ತಿದ್ದೆ. ಉಳಿದಂತೆ ನನಗೆ ಜವಾಬ್ದಾರಿ ನೀಡಿದ್ದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ. ದೆಹಲಿಯಲ್ಲಿ ಯಾವುದೇ ಕೆಲಸ ಇಲ್ಲ, ಆಫೀಸ್ ಕ್ಲೋಸ್ ಮಾಡೋದಷ್ಟೆ ಬಾಕಿ ಇದೆ. ಶೀಘ್ರದಲ್ಲೇ ಹೋಗಿ ಆಫೀಸ್ ಕ್ಲೋಸ್ ಮಾಡಿ ಎಲ್ಲರಿಗೂ ಧನ್ಯವಾದ ತಿಳಿಸಿ ಬರುತ್ತೇನೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g