May 9, 2024

MALNAD TV

HEART OF COFFEE CITY

ದತ್ತಜಯಂತಿ ವೇಳೆ ಗಿರಿಪ್ರದೇಶದಲ್ಲಿ ಕಸದರಾಶಿ: ಸ್ವಚ್ಛಗೊಳಿಸಿದ ಪೊಲೀಸರು

1 min read

ಚಿಕ್ಕಮಗಳೂರು: ಇತ್ತೀಚೆಗೆ ಮುಕ್ತಾಯವಾದ ದತ್ತಜಯಂತಿ ವೇಳೆ ಐ.ಡಿ ಪೀಠ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಘನತ್ಯಾಜ್ಯ ವಸ್ತುಗಳನ್ನು ತೆಗೆಯುವ ಮೂಲಕ ಪೊಲೀಸರು ಗಿರಿ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ್ದಾರೆ.

ಮುಳ್ಳಯ್ಯನಗಿರಿ, ಐ.ಡಿ ಪೀಠ ರಸ್ತೆಯಲ್ಲಿ ಕಸದ ರಾಶಿಯನ್ನು ಪೊಲೀಸರೇ ತೆಗೆದು ಸ್ವಚ್ಚತಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಮೊನ್ನೆಯಷ್ಟೇ ಸಂಪನ್ನಗೊಂಡ ದತ್ತಜಯಂತಿ ವೇಳೆ ಆಗಮಿಸಿದ ಸಾವಿರಾರು ಜನರು ಎಲ್ಲೆಂದರಲ್ಲಿ ಬಿಸಾಡಿದ್ದ ಊಟದ ಪ್ಲೇಟ್ ಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ತೆಗೆಯುವ ಮೂಲಕ ಘಟತ್ಯಾಜ್ಯ ಸಂಗ್ರಹ ಮಾಡಿದ್ದಾರೆ.

ಪ್ಲಾಸ್ಟಿಕ್ ನಿಷೇಧವಿದ್ದರೂ ಗಿರಿ ಪ್ರದೇಶದಲ್ಲಿ ಪ್ರವಾಸಿ ತಾಣಗಳಿಗೆ ಬರುವ ಜನರು ನೈರ್ಮಲ್ಯ ಉಂಟುಮಾಡದೇ ವಾಪಸ್ ತೆರಳುವುದಿಲ್ಲ. ಹೀಗೆ ತಾವು ತಂದ ತಿಂಡಿಗಳ ಪ್ಯಾಕೆಟ್, ನೀರಿನ ಬಾಟಲ್, ಊಟದ ಪ್ಲೇಟ್ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಪೊಲೀಸರು ತೆಗೆದು ಶುಚಿತ್ವ ಕಾಪಾಡಲು ಕಸ ತೆಗೆಯುವ ಸಿಬ್ಬಂದಿಗಳಿಗೆ ಸಾಥ್ ನೀಡಿದ್ದಾರೆ. ಮುಳ್ಳಯ್ಯನಗಿರಿ ರಸ್ತೆ, ಕವಿಕಲ್ ಗಂಡಿ , ಅತ್ತಿಗುಂಡಿ, ಕೆಮ್ಮಣ್ಣುಗುಂಡಿ ಕ್ರಾಸ್, ಝರಿಫಾಲ್ಸ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಘನತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಚತಾ ಕಾರ್ಯದಲ್ಲಿ ಶ್ರಮದಾನ ಮಾಡಿದ್ದಾರೆ. ಪೊಲೀಸರ ಈ ಸ್ವಚ್ಚತಾ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!