May 9, 2024

MALNAD TV

HEART OF COFFEE CITY

ಡಿ. 2 ರಂದು ‘ಗಾನ ವೈವಿಧ್ಯ’ ಕಾರ್ಯಕ್ರಮ

1 min read

ಚಿಕ್ಕಮಗಳೂರು: ಮಲೆನಾಡಿನ ಹೆಮ್ಮೆಯ ಸಾಧಕಿ ಜೀ ಟಿ.ವಿ ಸರಿಗಮಪ ಖ್ಯಾತಿಯ ಸಾಧ್ವಿನಿಕೊಪ್ಪ ಇವರಿಂದ ಗಾನ ವೈವಿಧ್ಯ ಕಾರ್ಯಕ್ರಮವನ್ನು ಡಿಸೆಂಬರ್ ೨ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಯಾಣ ನಗರ ಸಾಹಿತ್ಯ ವೇದಿಕೆಯ ಬಿಸಲೇಹಳ್ಳಿ ಸೋಮಶೇಖರ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಗಮ ಸಂಗೀತ ಗಂಗಾ, ಕಲ್ಕಟ್ಟಿ ಪುಸ್ತಕದ ಮನೆ, ಕಲ್ಯಾಣ ನಗರ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 2 ಶನಿವಾರದಂದು ನಗರದ ಕುವೆಂಪು ಕಲಾಮಂದಿರದಲ್ಲಿ ಗಾನ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಭಕ್ತಿ ಗೀತೆ, ಭಾವಗೀತೆ, ಜನಪದ, ತತ್ವಪದ, ಶಾಸ್ತ್ರೀಯ ಸಂಗೀತದ ಆಯ್ದಕೃತಿ ಭಾಗವನ್ನು ಸಾಧ್ವಿನಿ ಹಾಡಲಿದ್ದಾರೆ. ಬಾಲ್ಯದಲ್ಲಿಯೇ ರಾಜ್ಯ ಸರ್ಕಾರದ ಕಲಾಶ್ರೀ ಗೌರವ ಪುರಸ್ಕಾರ ಸ್ವೀಕರಿಸಿದ ಮಲೆನಾಡಿನ ಅಸಾಧಾರಣ ಪ್ರತಿಭಾವಂತೆ, ಜೀ ಕನ್ನಡದ ಸರಿಗಮಪ ದ ಸೀಸನ್ 15ರ ರನ್ನರ್ ಆಪ್, ಅಷ್ಟೇ ಅಲ್ಲದೆ ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಸಹ ತಮ್ಮನು ತಾವು ಗುರುತಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಬಲಾದಲ್ಲಿ ರಾಜೇಶ್ ಭಾಗವತ್, ಕೀಬೋರ್ಡ್ ನಲ್ಲಿ ಗುರುರಾಜ್, ರಿಥಮ್ ಪ್ಯಾಡ್ ನಲ್ಲಿ ರಾಮ ರಾವ್ ರಂಗದೊಳ್, ಹಾಗು ಕೊಳಲಿನಲ್ಲಿ ಅಭಿಷೇಕ್ ಬೆಂಗಳೂರು ಸಾಥ್ ನೀಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸುಗಮ ಸಂಗೀತಗಾರರಾದ ಎಸ್ ಎಸ್ ವೆಂಕಟೇಶ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!