May 9, 2024

MALNAD TV

HEART OF COFFEE CITY

ಡಿ .3 ರಂದು “ಕರಿನೀರ ವೀರ” ನಾಟಕ ಪ್ರದರ್ಶನ: ಸಾವರ್ಕರ್ ಪ್ರತಿಷ್ಟಾನ ಹೇಳಿಕೆ

1 min read

ಚಿಕ್ಕಮಗಳೂರು: ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ “ಕರಿನೀರ ವೀರ” ನಾಟಕ ಇದೇ ಭಾನುವಾರ ಡಿಸೆಂಬರ್ 3 ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಸಾವರ್ಕರ್ ಪ್ರತಿಷ್ಟಾನದ ಪ್ರೇಮ್ ಕುಮಾರು ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಾವರ್ಕರ್ ಜೈಲು ವಾಸದ ವೇಳೆ ಅನುಭವಿಸಿದ ದೈಹಿಕ , ಮಾನಸಿಕ ಹಿಂಸೆ ಹಾಗೂ ಸ್ವತಂತ್ರ ಭಾರತದಲ್ಲೂ ಪಟ್ಟ ಕಷ್ಟ-ನಷ್ಟಗಳ ಕುರಿತ ಹೋರಾಟದ ಕಥಾನಕ ಹೊಂದಿರುವ “ಕರಿನೀರ ವೀರ” ನಾಟಕ ನುರಿತ ಕಲಾವಿದರು ನಡೆಸಿಕೊಡಲಿದ್ದಾರೆ ಎಂದರು. ಸಾವರ್ಕರ್ ಕುರಿತು ದುರುದ್ದೇಶ ಪೂರಿತ ಹೇಳಿಕೆ ನೀಡುವವರು ನಾಟಕ ವೀಕ್ಷಿಸಿ ನೈಜತೆಯನ್ನು ಅರ್ಥ ಮಾಡಿಕೊಳ್ಳಬೇಕು ನಂತರ ಯಾವುದೇ ಟೀಕೆ ಇದ್ದರೆ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇದೆ ಎಂದು ಸಾವರ್ಕರ್ ಪ್ರತಿಷ್ಟಾನದ ಸ. ಗಿರಿಜಾಶಂಕರ್ ಹೇಳಿದರು. ನಾಟಕ ದ ಟಿಕೆಟ್ ದರ 100 ರೂಗಳಾಗಿದ್ದು ಎಂ.ಜಿ. ರಸ್ತೆಯ ಶೃಂಗಾರ್ ಮೆಡಿಕಲ್‌, ಬಸವನಹಳ್ಳಿ ಮುಖ್ಯ ರಸ್ತೆಯ ಕಾಮತ್ ಕಾಫಿ ವರ್ಕ್, ವಿಜಯಪುರದ ಭಾರತೀ ಫ್ರೂಟ್ ಅಂಡ್ ವೆಜಿಟೇಬಲ್ಸ್ ಗಳಲ್ಲಿ ದೊರೆಯಲಿದೆ ಎಂದು ತಿಳಿಸಿದ ಅವರು ದೇಶಭಕ್ತರೆಲ್ಲರೂ ವಿದ್ಯಾರ್ಥಿಗಳೆಲ್ಲರೂ ಈ ನಾಟಕವನ್ನು ನೋಡಬೇಕು ಎಂದು ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!