May 17, 2024

MALNAD TV

HEART OF COFFEE CITY

ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ, ಬಿಜೆಪಿಯ ತಪ್ಪಿನಿಂದ ಗೆದ್ದಿದ್ದಾರೆ

1 min read

ಕಾಂಗ್ರೆಸ್ಸಿಗರು ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ, ಬಿಜೆಪಿಯ ತಪ್ಪಿನಿಂದ ಗೆದ್ದಿದ್ದಾರೆ ಅಷ್ಟೆ, ಬಿಜೆಪಿಯ ಮೀಸಲಾತಿ, ಹಿಜಬ್ ನಂತಹಾ ನಿರ್ಧಾರದಿಂದ ಗೆದ್ದಿರೋದು ಅಷ್ಟೆ, ಈಗ ಏನೇ ಮಾತನಾಡಿದ್ರು ಹತಾಶೆಯ ಮಾತು ಅಂತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಕಡೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ, ಡಿಕೆಶಿ ಅವರಿಗೆ  ಅಭಿನಂದನೆಗಳು, ಅದರ ಹಿಂದೆ ಅವರಿಗೆ ದೊಡ್ಡ ಜಬಾವ್ದಾರಿ ಇದೆ, ಮಹಿಳೆಯರಿಗೆ 2000, ಫ್ರೀ ಬಸ್, ಯುವಕರಿಗೆ ಸ್ಟೇ ಫಂಡ್, ವಿದ್ಯುತ್ ಫ್ರೀ ಎಲ್ಲಾ ಜಾರಿಗೆ ಬರಲಿ, ನಂಬಿಕೆ ಇಟ್ಟು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ, ಜನ ಕಾಯ್ತಿದ್ದಾರೆ. ಕೊಟ್ಟ ಮಾತನ್ನ ಉಳಿಸಿಕೊಂಡು ಹೇಗೆ ನಿಭಾಯಿಸುತ್ತಾರೋ ನೋಡೋಣ, ಸರ್ಕಾರ ಬಂದು 48 ಗಂಟೆಯೂ ಕಳೆದಿಲ್ಲ, ಹರಿಪ್ರಸಾದ್ ಈಗಲೇ ಯೂಟರ್ನ್ ಹೊಡೀತಿದ್ದಾರೆ. ಎಪಿಎಲ್ ಕಾರ್ಡ್ ನವರಿಗೆ, ಟ್ಯಾಕ್ಸ್ ಕಟ್ಟೋರ್ಗೆ ಇಲ್ಲ, ಬಿಪಿಎಲ್ ನವರಿಗೆ ಮಾತ್ರ ಅಂತಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಲಿ ಎಂದು ಹಾರೈಸೋಣ. ಈಗಲೇ ಚರ್ಚೆ ಬೇಡ,  ಸರ್ಕಾರದ ನಿಜ ರೂಪ ಹೊರಬರಬೇಕು. ಎರಡು ತಿಂಗಳು ಕಳೆಯಲಿ, ಸಿಎಂ, ಸಚಿವರು ಎಲ್ಲರೂ ಪ್ರಮಾಣ ವಚನ ಸ್ವೀಕರಿಸಲಿ. ಕೊಟ್ಟ ಮಾತನ್ನ ಹೇಗೆ ಉಳಿಸಿಕೊಳ್ಳುತ್ತಾರೆ ನೋಡಿ ಚರ್ಚಿಸೋಣ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!