May 10, 2024

MALNAD TV

HEART OF COFFEE CITY

ಮಳೆಯ ಮಧ್ಯೆಯೇ ಕಾಫಿ ಕೊಯ್ಲು

1 min read

ಧಾರಾಕಾರ ಮಳೆ ಮಧ್ಯೆಯೇ ಮಳೆಯಲ್ಲಿ ನೆನೆದುಕೊಂಡೇ ಹಣ್ಣಾಗಿರೋ ಕಾಫಿಯನ್ನ ಕುಯ್ಯುವಂತಹಾ ಅನಿವಾರ್ಯ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‍ನಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನ ಬೆಳೆಯಲಾಗಿದೆ. ಯಾವಾಗ ಬೇಕು ಅವಾಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಈಗಾಗಲೇ ರೋಬೋಸ್ಟಾ ಹಣ್ಣಾಗಿದ್ದು ಗಿಡದಿಂದ ಉದುರುತ್ತಿದೆ. ಹಾಗಾಗಿ, ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ, ಕಾರ್‍ಬೈಲ್ ಗ್ರಾಮದ ಸುತ್ತಮುತ್ತ ಕೂಲಿ ಕಾರ್ಮಿಕರು ಮಳೆಯಲ್ಲಿ ನೆನೆದುಕೊಂಡೇ ಕಾಫಿಯನ್ನ ಕುಯ್ಯುವಂತಾಗಿದೆ. ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಹಗಲಲ್ಲಿ ಬಿಡುವು ನೀಡುವ ವರುಣದೇವ ಸಂಜೆಗಾಗುತ್ತಿದ್ದಂತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.

 

ಅಕಾಲಿಕ ಮಳೆಯಿಂದಾ ಈಗಾಗಲೇ ಅರೇಬಿಕಾ ಹಾಗೂ ರೋಬೋಸ್ಟಾ ಹಣ್ಣಾಗಿದೆ. ಈಗ ಕುಯ್ಯದಿದ್ದಾರೆ. ಮಣ್ಣು ಪಾಲಾಗುತ್ತೆ. ಹಾಗಾಗಿ, ಬೆಳೆಗಾರರು ಹೆಚ್ಚಿನ ಕೂಲಿ ನೀಡಿ ಮಳೆಯಲ್ಲೇ ಕಾಫಿ ಹಣ್ಣನ್ನ ಕೊಯ್ಲು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಲ್ಲಿ ಈಗಾಗಲೇ ಸಾಕಷ್ಟು ಕಾಫಿ ಮಣ್ಣು ಪಾಲಾಗಿದೆ. ಮಳೆ-ಗಾಳಿಗೆ ಕಾಯಿಗಳು ಉದುರಿದ್ದು ಅಳಿದುಳಿದ ಕಾಫಿಗೆ ಈಗ ಮತ್ತೆ ಮಳೆ ಕಾಟ ಆರಂಭವಾಗಿದೆ. ಹಾಗಾಗಿ, ಬೆಳೆಗಾರರು ಮಳೆಯಲ್ಲೇ ಕಾಫಿಯನ್ನ ಕೊಯ್ಲು ಮಾಡುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಭಾರೀ ಮಳೆಯಿಂದ ಬೆಳೆ ಕಳೆದುಕೊಂಡಿದ್ದ ಬೆಳೆಗಾರರು ಈ ವರ್ಷವೂ ಬೆಳೆಯನ್ನ ಕಳೆದುಕೊಳ್ಳುವ ಆತಂಕದಿದ್ದಾರೆ. ಮಧ್ಯಮ ವರ್ಗದ ಬೆಳೆಗಾರರು ಬದುಕು ಮತ್ತಷ್ಟು ಶೋಚನಿಯವಾಗಿದೆ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ನಿಲ್ಲಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!