ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆ ಆರಂಭದಲ್ಲೇ ಗದ್ದಲ: ಮಾತಿನ ಚಕಮಕಿ
1 min readಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆ ಆರಂಭದಲ್ಲೇ ಬ್ಯಾನರ್ ಬಂಟಿಂಗ್ ಗಳ ದುಂದು ವೆಚ್ಚದ ಬಗ್ಗೆ ಗದ್ದಲ ಗೊಂದಲ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಸದಸ್ಯ ಟಿ.ರಾಜಶೇಖರ್ ವಿಷಯ ಪ್ರಸ್ಥಾಪಿಸಿ ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಹಾಗೂ ಬಂಟಿಂಗ್ ಗಳನ್ನು ಅಳವಡಿಸಲಾಗಿದೆ. ಇದು ಲೆಕ್ಕವಿಲ್ಲದೇ ಖರ್ಚು ಮಾಡುವ ಪ್ರಕ್ರಿಯೆ ಒಪ್ಪುವಂತದ್ದಲ್ಲ ಎಂದು ಪ್ರಶ್ನಿಸಿದರು. ಕಳೆದ ವರ್ಷದಿಂದ ನಗರದ ಹಲವೆಡೆ ಬ್ಯಾನರ್ ಹಾಗೂ ಬಂಟಿಂಗ್ ಗಳನ್ನು ನಗರಸಭೆ ವತಿಯಿಂದ ಅಳವಡಿಸಲಾಗಿದೆ ಆದರೆ ಮನಸೋ ಇಚ್ಚೆ ಖರ್ಚು ಮಾಡಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ವಿಪರೀತ ಖರ್ಚು ನಗರಸಭೆಗೆ ಹೊರೆಯಾಗುತ್ತಿದೆ ಇದನ್ನು ತಪ್ಪಿಸಬೇಕು ಎಂದು ರಾಜಶೇಖರ ಹೇಳುತ್ತಿದ್ದಂತೆ ಕಳೆದ ಅವಧಿಯಲ್ಲೂ ಈ ರೀತಿಯ ಬ್ಯಾನರ್ ಹಾಕಲು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಮುನೀರ್ ಹೇಳುತ್ತಿದ್ದಂತೆ ರಾಜಶೇಖರ ಮುನೀರ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು ಎಂದು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ ಹೇಳಿದರು. ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಶಾಸಕ ಎಚ್.ಡಿ ತಮ್ಮಯ್ಯ ಟ್ರೇಡ್ ಲೈಸೆನ್ಸ್ ದರ ವಿಪರೀತ ಹೆಚ್ಚಳವಾಗಿದ್ದು ಇದನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು ಅಲ್ಲದೇ ಟ್ರೇಡ್ ಲೈಸೆನ್ಸ್ ಇಲ್ಲದಿದ್ದರೆ ಯಾವುದೇ ಅಂಗಡಿಗಳನ್ನು ಮುಚ್ಚಿಸಲು ನಿಮಗೆ ಅವಕಾಶ ಇಲ್ಲ ಎಂದು ಎಚ್ಚರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g