ಚಿಕ್ಕಮಗಳೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಇಂದು ಕೋಲಾಹಲ ನಿರೀಕ್ಷೆ..!
1 min readಚಿಕ್ಕಮಗಳೂರು ನಗರ ಸಭೆಯಲ್ಲಿ ಇಂದು ಮತ್ತೊಮ್ಮೆ ಕೋಲಾಹಲ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇವತ್ತಿನ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೇಲೆ ಮುಗಿಬೀಳಲು ಬಿಜೆಪಿ ಸದಸ್ಯರೇ ಸನ್ನದ್ದರಾಗಿದ್ದಾರೆ. ರಾಜೀನಾಮೆ ನೀಡದೆ ಸತಾಯಿಸಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರುವ ವೇಣುಗೋಪಾಲ ವಿರುದ್ಧ ಇಂದಿನ ಸಾಮಾನ್ಯ ಸಭೆಯಲ್ಲೂ ಕೋಲಾಹಲ ಸೃಷ್ಟಿಸಲು ಬಿಜೆಪಿ ಹಾಗೂ ಜೆಡಿಎಸ್ ನಗರಸಭಾ ಸದಸ್ಯರು ಪ್ಲಾನ್ ಮಾಡಿಕೊಂಡಿದ್ದಾರೆ. ಇಂದಿನ ಸಾಮಾನ್ಯ ಸಭೆಯಲ್ಲಿ ಯಾವುದೇ ಬಿಲ್ ಪಾಸ್ ಮಾಡಲು ಬಿಡುವುದಿಲ್ಲ ಎಂದು ಬಿಜೆಪಿ ಸದಸ್ಯ ಮಧುಕುಮಾರ್ ರಾಜ್ ಅರಸ್ ಎಚ್ಚರಿಸಿದ್ದಾರೆ. ಅವಿಶ್ವಾಸದ ತೂಗುಗತ್ತಿಯಿಂದ ಪಾರಾಗಿರುವ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ ಇಂದು ಸಭೆ ನಡೆಸಲು ಬಹುಮತ ಬೇಕು ಯಾವುದೇ ನಿರ್ಣಯ ಕೈಗೊಳ್ಳಲು ಬಹುಮತ ಬೇಕು ಆದರೆ ಇದಾವುದನ್ನೂ ಅವರು ಮಾಡುವುದಿಲ್ಲ ಎಂಬ ಅನುಮಾನದಿಂದ ಈಗಾಗಲೇ ಜಿಲ್ಲಾಧಿಕಾರಿಯವರಿಗೆ 19 ಜನ ಬಿಜೆಪಿ ಜೆಡಿಎಸ್ ನ ನಗರಸಭೆ ಸದಸ್ಯರು ದೂರು ಸಲ್ಲಿಸಿ ಯಾವುದೇ ಮಂಜೂರಾತಿ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ನಗರ ಸಭೆ ಅಧ್ಯಕ್ಷ ವೇಣುಗೋಪಾಲ್ ಪಾರದರ್ಶಕ ಕೆಲಸ ಮಾಡುತ್ತಿಲ್ಲ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ಏಕಪಕ್ಷೀಯ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಸದಸ್ಯ ಎ.ಸಿ ಕುಮಾರ್ ಆರೋಪಿಸಿದ್ದಾರೆ. ಬಹುಮತ ಇದೆ ಎಂಬ ಕಲ್ಪನೆಯಲ್ಲಿ ಉದ್ದಟತನದಿಂದ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡುತ್ತಾ ಬಂಡ ಧೈರ್ಯದಿಂದ ಬೇಕಾಬಿಟ್ಟಿ ಟೆಂಡರ್ ಗಳನ್ನು ಸಹಾ ಮಾಡುತ್ತಿರುವ ಅಧ್ಯಕ್ಷ ವರಸಿದ್ದಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದು ಅಧಿಕಾರ ದುರ್ಬಳಕೆ ಮಾಡುತ್ತಿದ್ದು ಇಂದಿನ ಸಭೆಯಲ್ಲಿ ಯಾವುದೇ ಮಂಜೂರಾತಿಗೆ ಬಹುಮತ ಇಲ್ಲದೇ ಪಾಸ್ ಮಾಡಲು ನಾವು ಬಿಡುವುದಿಲ್ಲ ಎಂದು ಬಿಜೆಪಿ ಜೆಡಿಎಸ್ ಸದಸ್ಯರು ಎಚ್ಚರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g