ನಿಮ್ಮ ಅಪ್ಪ, ಅಣ್ಣ ಭಿಕ್ಷುಕರಾ… ಸಿ.ಟಿ. ರವಿಗೆ ಕೆ.ಪಿ.ಸಿ.ಸಿ ವಕ್ತಾರ ದೇವರಾಜ್ ಪ್ರಶ್ನೆ..?
1 min readಚಿಕ್ಕಮಗಳೂರು: ನಿಮ್ಮ ಅಪ್ಪ,ಅಣ್ಣ ಭಿಕ್ಷುಕರಾ ಎಂದು ಸಿ.ಟಿ. ರವಿಯನ್ನ ಕೆ.ಪಿ.ಸಿ.ಸಿ ವಕ್ತಾರ ಎಚ್.ಎಚ್.ದೇವರಾಜ್ ಕಠೋರವಾಗಿ ಪ್ರಶ್ನಿಸಿದ್ದಾರೆ.
ರೈತರಿಗೆ ನೀಡುತ್ತಿರುವ 2000 ಹಣವನ್ನು ಭಿಕ್ಷೆಗೆ ಹೋಲಿಸಿದ್ದ ಮಾಜಿ ಶಾಸಕ ಸಿ.ಟಿ ರವಿ ವಿರುದ್ಧ ಹರಿ ಹಾಯ್ದಿರುವ ಕೆ.ಪಿ.ಸಿ.ಸಿ ವಕ್ತಾರ ಎಚ್.ಎಚ್ ದೇವರಾಜ್ ನಿಮ್ಮ ಅಪ್ಪ ಹಾಗೂ ಅಣ್ಣ ಭಿಕ್ಷುಕರಾ ಎಂದು ಸಿ.ಟಿ ರವಿಯವರನ್ನ ಪ್ರಶ್ನಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದೇವರಾಜ್ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸಿ.ಟಿ ರವಿ ಹತಾಶರಾಗಿದ್ದು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸದ್ಯ ಬಿಜೆಪಿ ಪಕ್ಷದಲ್ಲಿ ಸಿ.ಟಿ ರವಿಗೆ ಬೆಲೆಯೇ ಇಲ್ಲದೆ ದಿಗ್ಬ್ರಾಂತರಾಗಿದ್ದಾರೆ ಎಂದು ಆರೋಪಿಸಿದ ಎಚ್ಎಚ್ ದೇವರಾಜ್ ಕಾಂಗ್ರೆಸ್ ಸರ್ಕಾರ ಬೀಳಿಸುವ ಮಾತನಾಡುವ ಬಿಜೆಪಿ ಪರಿಸ್ಥಿತಿ ಒಂದು ಮನೆ ಮೂರು ಬಾಗಿಲಂತಾಗಿದ್ದು ಬಸವನಗೌಡ ಪಾಟೀಲ್ ಯತ್ನಾಳ್ ತಲೆ ರಿಪೇರಿ ಮಾಡಲು ಪಕ್ಷದ ಮುಖಂಡರಿಗೆ ಆಗುತ್ತಿಲ್ಲ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಅತ್ಯಂತ ವೀಕ್ ಲೀಡರ್ ಎಂದು ಆರೋಪಿಸಿದರು. ಜಿಲ್ಲೆಗೆ ಬರಗಾಲ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ಬಿಡಿಗಾಸನ್ನು ಸಂಸದೆ ಶೋಭಾ ಕರಂದ್ಲಾಜೆ ತಂದಿಲ್ಲ ಕೇವಲ ಕ್ಷುಲ್ಲಕ ವಿಚಾರಗಳ ಕುರಿತು ಮಾತನಾಡುವುದು ಮಾತ್ರ ಅವರ ಹವ್ಯಾಸ ಎಂದ ದೇವರಾಜ್ ವಿಧಾನಸಭೆ ಅಧಿವೇಶನ ಮುಗಿದ ನಂತರ ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಮುಖ್ಯಮಂತ್ರಿ ಬಳಿ ಬರಗಾಲ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಕುರಿತು ಚರ್ಚಿಸಲು ತೆರಳುವುದಾಗಿ ಅವರು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g