May 13, 2024

MALNAD TV

HEART OF COFFEE CITY

ಸಭೆಗೆ ಅಧಿಕಾರಿಗಳ ಗೈರು ಎ.ಸಿ ರಾಜೇಶ್ ಗರಂ: ಶೋಕಾಸ್ ನೋಟೀಸ್ ಜಾರಿ

1 min read

ಚಿಕ್ಕಮಗಳೂರು: ಪರಿಶಿಷ್ಟರ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಕುರಿತ ಉಸ್ತುವಾರಿ ಸಮಿತಿಯ ಉಪವಿಭಾಗ ಮಟ್ಟದ ಸಭೆಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ಗರಂ ಆದ ಎ.ಸಿ ಎಚ್.ಡಿ ರಾಜೇಶ್ ದಿಢೀರ್ ಸಭೆ ರದ್ದುಗೊಳಿಸಿ ಎಲ್ಲರಿಗೂ ಶೋಕಾಸ್ ನೋಟೀಸ್ ನೀಡಿ ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಎಚ್ಚರಿಸಿದ್ದಾರೆ.

ನಗರದ ತಾಲೂಕು ಪಂಚಾಯ್ತಿಯ ಅಂಬೇಡ್ಕರ್ ಭವನದಲ್ಲಿ ನಡೆಯಬೇಕಿದ್ದ ಸಭೆಗೆ ಚಿಕ್ಕಮಗಳೂರು ತಹಶಿಲ್ದಾರ್ ತಾ.ಪಂ ಈಒ,, ಸಮಾಜ ಕಲ್ಯಾಣ ಇಲಾಖೆ ಡಿ.ಡಿ,, ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಐ. ಪೊಲೀಸ್ ಅಧಿಕಾರಿ ಸೇರಿದಂತೆ ಬಹುತೇಕರು ಗೈರಾಗಿದ್ದನ್ನು ಕಂಡ ಎ.ಸಿ ಎಚ್.ಡಿ ರಾಜೇಶ್ ಸಭೆಯನ್ನು ರದ್ದು ಪಡಿಸಿದರು. ಅನುಸೂಚಿತ ಜಾತಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಕುರಿತ ಜಾಗೃತಿ ಸಭೆ ವೇಳೆ ಶೇಕಡಾ 85 ರಷ್ಟು ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಾಗದ ಹಿನ್ನೆಲೆ ಗರಂ ಆದ ಉಪವಿಭಾಗಾಧಿಕಾರಿ  ಸಭೆಯನ್ನೆ ರದ್ದುಗೊಳಿಸಿದ್ದಾರೆ . ಅಧಿಕಾರಿಗಳ ಹಾಜರಾತಿ ಕಡಿಮೆ ಇರುವುದಕ್ಕೆ ಸಿಟ್ಟಾದ ಉಪವಿಭಾಗಾಧಿಕಾರಿ ಗೈರಾದವರಿಗೆ ಶೋಕಾಸ್ ನೋಟೀಸ್ ನೀಡಿ ಎಂದು ಹೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾನಿಲ್ಲಿ ಯಾವುದಾದರೂ ಕಥೆ ಹೇಳಲು ಬಂದಿದ್ದೇನಾ,,, ಪ್ರತಿಬಾರಿ ಇದೇ ರೀತಿ ಆಗುತ್ತಿದೆ ಸಭೆಗೆ ಬಹುತೇಕ ಇಲಾಖೆಯವರು ಬರುವುದೇ ಇಲ್ಲ, ಸಬೂಬು ನೀಡಿ ಬಾರದೇ ಇರುವುದು ಕೆಲವರಿಗೆ ಅಭ್ಯಾಸ ಆಗಿದೆ. ಇದು ಪುನರಾವರ್ತನೆ ಆಗಬಾರದು ಇಂದಿನ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಜೊತೆಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಎ.ಸಿ ಎಚ್.ಡಿ ರಾಜೇಶ್ ಎಚ್ಚರಿಕೆ ನೀಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!