ಚಿರತೆ ಅಂತಾ ಬಲೆ ಬೀಸಿದ ಅಧಿಕಾರಿಗಳಿಗೆ ಸಿಕ್ಕಿದ್ದು ನಾಯಿ…!
1 min read
ಕೊಪ್ಪ: ಚಿರತೆ ನಗರದಲ್ಲಿ ನುಗ್ಗಿದೆ ಎಂಬ ಮಾಹಿತಿ ಹಿನ್ನೆಲೆ ಸರ್ವಸನ್ನದ್ದವಾಗಿ ಚಿರತೆ ಸೆರೆಹಿಡಿಯಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆಶ್ಚರ್ಯ ಚಕಿತರಾದ ಘಟನೆ ಕೊಪ್ಪ ಪಟ್ಟಣದ ಮೇಲಿನ ಪೇಟೆಯಲ್ಲಿ ನಡದಿದೆ.
ಇಲ್ಲಿನ ಮುಖ್ಯ ರಸ್ತೆಯ ಚರಂಡಿಯೊಳಕ್ಕೆ ಇಂದು ಮುಂಜಾನೆ ಚಿರತೆಯೊಂದು ನಾಯಿಯನ್ನು ಹೊತ್ತು ಇಳಿದಿದ್ದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬ ಅರಣ್ಯ ಇಲಾಖೆಗೆ ಕರೆಮಾಡಿ ಚಿರತೆ ನಾಯಿಯನ್ನು ಸೆರೆ ಹಿಡಿದು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಪೈಪ್ ಲೈನ್ ಒಳಗೆ ಇಳಿದಿದೆ ಎಂದು ಮಾಹಿತಿ ನೀಡಿದ್ದಾನೆ ತಕ್ಷಣವೇ ಅಲರ್ಟ್ ಆದ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಬಲೆ, ಬೋನ್ ಸಿದ್ಧಪಡಿಸಿಕೊಂಡು ಚಿರತೆಗೆ ಬಲೆ ಬೀಸಿದ್ರು. ಈ ಸುದ್ದಿ ಹರಡುತ್ತಿದ್ದಂತೆ ಪಟ್ಟಣದ ನೂರಾರು ಜನರು ಕುತೂಹಲದಿಂದ ಸ್ಥಳಕ್ಕೆ ಬಂದಿದ್ರು. ಚಿರತೆ ಈಗಲೋ ಆಗಲೋ ಚರಂಡಿಯ ಒಳಗಿನಿಂದ ಹೊರಬರುತ್ತದೆ ಎಂದು ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರು ಕೊನೆಗೆ ಬೆಸ್ತು ಬಿದ್ದು ನಕ್ಕು ಹಿಂತಿರುಗಿದರು.
ಅಧಿಕಾರಿಗಳು ಚರಂಡಿಯ ಸುತ್ತಲೂ ಬಲೆ ಹರಡಿ, ಬೊನು ಸಿದ್ಧಪಡಿಸಿ ಚಿರತೆಗಾಗಿ ಕಾದಿದ್ರು, ಅಧಿಕಾರಿಗಳು ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿದ ನಂತರ ಚರಂಡಿಯಿಂದ ಪ್ರಾಣಿಯೊಂದು ಹೊರಬಂದಿದೆ. ಚಿರತೆ ಹೊರಬಂತು ಎಂದು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಜನರು ಚರಂಡಿಯಿಂದ ಹೊರಬಂದ ಪ್ರಾಣಿಯನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಚರಂಡಿ ಒಳಗಿನಿಂದ ಬಡಕಲು ನಾಯಿಯೊಂದು ಮರಿಯನ್ನು ಹೊತ್ತುಕೊಂಡು ಹೊರಬಂದಿದೆ. ಇದನ್ನು ಕಂಡು ಜನರು, ಅಧಿಕಾರಿಗಳು ನಕ್ಕು ನಕ್ಕು ಸುಸ್ತಾಗಿದ್ದು ಮಾಹಿತಿ ನೀಡಿದ ವ್ಯಕ್ತಿ ಕಾಲ್ಕಿತ್ತಿದ್ದ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g