ವೀಕೆಂಡ್ ಕರ್ಫ್ಯೂ -ಅವೈಜ್ಞಾನಿಕ ಕ್ರಮ- ಎಸ್ ಎಲ್ ಬೋಜೇಗೌಡ
1 min readಚಿಕ್ಕಮಗಳೂರು : ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯಸರ್ಕಾರದ ವಿರುದ್ದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ಕಿಡಿಕಾರಿದ್ದಾರೆ. ಅವರು ಇಂದು ಚಿಕ್ಕಮಗಳೂರಿಲ್ಲಿ ಮಾತಾಡಿಯಾರಿಗೋಸ್ಕರ ವೀಕೆಂಡ್ ಕರ್ಫ್ಯೂ ಎಂದು ಪ್ರಶ್ನೆ ಮಾಡಿ ಜನಸಾಮಾನ್ಯರ ಆರೋಗ್ಯ ಅವರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ವೀಕೆಂಡ್ ಕೃಪೆಯಿಂದ ವಾರಂತ್ಯದಲ್ಲಿ ದುಡಿಯುವ ಕೈಗಳನ್ನು ಸರ್ಕಾರ ಕಟ್ಟಿಹಾಕಿದೆ.ಇದರಿಂದ ಬಡ ಕುಟುಂಬಗಳು ಬೀದಿಗೆ ಬೀಳಲಿದೆ ಹಾರ್ದಿಕವಾಗಿ ತೀವ್ರತರವಾದ ಅಂತಹ ಪೆಟ್ಟು ಬೀಳಲಿದೆ ಎಂದು ತಿಳಿಸಿದರು.ಜನಸಾಮಾನ್ಯರ ತೊಂದರೆಗೆ ಸರ್ಕಾರ ಸ್ಪಂದಿಸುತ್ತಿಲ್ಲ,ವೀಕೆಂಡ್ ಕರ್ಫ್ಯೂ ಯಾರಿಗೆ ಬೇಕಾಗಿದೆ ಎಂದರು.
ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಯಾವ ಪುರುಷಾರ್ಥಕ್ಕಾಗಿ ವೀಕಂಡ್ ಕರ್ಫ್ಯೂ ಬೇಕಾಗಿದೆ,ಯುರೋಪ್ ಕಂಟ್ರಿ ಯಲ್ಲೇ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ,ಇಲ್ಲಿ ಯಾಕೆ ಬೇಕಕಾಗಿದೆ.ವೀಕೆಂಡ್ ಕರ್ಫ್ಯೂ ಅನ್ನುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.ಕಳೆದ ವರ್ಷದ ಲಾಕ್ಡೌನ್ ನಲ್ಲಿ ಘೋಷಣೆ ಮಾಡಿರುವ ಪರಿಹಾರವನ್ನೇ ಇನ್ನೂ ನೀಡಿಲ್ಲ , ಸದ್ಯ ಸರ್ಕಾರ ಜಾರಿ ಗೊಳಿಸಿರುವ ವೀಕೆಂಡ್ ಕರ್ಫ್ಯೂ ಅಲ್ಲ ಬದಲಾಗಿ ಇದು ಲಾಕ್ಡೌನ್ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g